The New Indian Express
ಚಂಡೀಗಢ: ಅಚ್ಚರಿಯ ಘಟನೆಯೊಂದರಲ್ಲಿ ಉಗ್ರಗಾಮಿಯ ಸ್ಥಳವನ್ನು ಬಂಧಿಸಲಾದ ಸ್ಥಳದ ಹೆಸರನ್ನು ತಪ್ಪಾಗಿ ಪ್ರಕಟಿಸಿದ ಕಾರಣ ಆ ಸುದ್ದಿ ಬರೆದ ಪತ್ರಕರ್ತನನ್ನು ಬಂಧಿಸಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಪೊಲೀಸರ ವಿರುದ್ಧ ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಿರುವ ಕೂಗು ಎದ್ದಿದೆ.
ಇದನ್ನೂ ಓದಿ: ತಪ್ಪಿದ ಮಹಾ ದುರಂತ: ಪಾಕ್ನಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿ 6 ಭಯೋತ್ಪಾದಕರ ಬಂಧನ!
ದೈನಿಕ್ ಭಾಸ್ಕರ್ ಎನ್ನುವ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದ ಸುನಿಲ್ ಬರಾರ್ ಬಂಧನಕ್ಕೀಡಾದ ವ್ಯಕ್ತಿ. ಅದೇ ಪತ್ರಿಕೆಯ ಸಂಪಾದಕ ಸಂದೀಪ್ ಶರ್ಮಾ ಅವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮರ್ಡೋನ್ ಸಾಹಿಬ್ ಗ್ರಾಮದಲ್ಲಿ ಓರ್ವ ಉಗ್ರ ಟಿಫಿನ್ ಬಾಂಬ್ ಸಂಚು ರೂಪಿಸಿದ್ದ. ಆದರೆ ಪತ್ರಿಕೆಯಲ್ಲಿ ಐಒಸಿ ಡಿಪೋ ಎಂಬಲ್ಲಿಂದ ಉಗ್ರನನ್ನು ಬಂಧಿಸಲಾಯಿತು ಎಂದು ಬರೆಯಲಾಗಿತ್ತು. ಮಾರನೇ ದಿನವೇ ತಪ್ಪನ್ನು ತಿದ್ದಿ ಉಗ್ರನನ್ನು ಬಂಧಿಸಿದ ಸರಿಯಾದ ಸ್ಥಳವನ್ನು ಪತ್ರಿಕೆ ಪ್ರಕಟಿಸಿತ್ತು.
ಇದನ್ನೂ ಓದಿ: ಇಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು: ಬೆಂಗಳೂರು ಮೂಲದ ಶಂಕಿತನ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ