ಸರ್ವಿಸ್ ರೈಫಲ್ ನಿಂದ ಆಕಸ್ಮಿಕವಾಗಿ ಸಿಡಿದ ಗುಂಡು: ಸಿ ಆರ್ ಪಿ ಎಫ್ ಹೆಡ್ ಕಾನ್ ಸ್ಟೇಬಲ್ ಸಾವು

ಬಂದೂಕಿನಿಂದ ಸಿಡಿದ ಗುಂಡು ತ್ರಿಲೋಕ್ ಸಿಂಗ್ ಅವರ ತಲೆಯನ್ನು ಭೇಧಿಸಿ, ಬಸ್ಸಿನ ಛಾವಣಿಯನ್ನೂ ಭೇದಿಸಿ ಬಸ್ ನ ಟಾಪ್ ನಲ್ಲಿ ಕುಳಿತಿದ್ದ ಸಹೋದ್ಯೋಗಿ ಮಹಿಳಾ ಪೇದೆಯನ್ನು ಗಾಯಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್ ಪುರ: ಪ್ಯಾಸೆಂಜರ್ ಬಸ್ ನಲ್ಲಿ ಕುಳಿತಿದ್ದ ಸಿ ಆರ್ ಪಿ ಎಫ್ ಹೆಡ್ ಕಾನ್ ಸ್ಟೇಬಲ್ ಬಂದೂಕಿನಿಂದ  ಸಿಡಿದ ಗುಂಡು ಆತನ ಸಾವಿಗೆ ಕಾರಣವಾದ ಘಟನೆ ಛತ್ತೀಸ್ ಗಡ ರಾಜ್ಯದ ಬಸ್ತರ್ ಎಂಬಲ್ಲಿ ನಡೆದಿದೆ. 

ಮೃತಪಟ್ಟ ಜವಾನ ಹೆಸರು ತ್ರಿಲೋಕ್ ಸಿಂಗ್ ಎಂದು ತಿಳಿದುಬಂದಿದೆ. ಬಸ್ ನಲ್ಲಿ ಮೃತರ ಜೊತೆ ಸಹೋದ್ಯೋಗಿ ಮಹಿಳಾ ಪೇದೆಯೂ ಇದ್ದರು. ಬಂದೂಕಿನಿಂದ ಸಿಡಿದ ಗುಂಡು ತ್ರಿಲೋಕ್ ಸಿಂಗ್ ಅವರ ತಲೆಯನ್ನು ಭೇಧಿಸಿ, ಬಸ್ಸಿನ ಛಾವಣಿಯನ್ನೂ ಭೇದಿಸಿ ಬಸ್ ನ ಟಾಪ್ ನಲ್ಲಿ ಕುಳಿತಿದ್ದ ಸಹೋದ್ಯೋಗಿ ಮಹಿಳಾ ಪೇದೆಯನ್ನು ಗಾಯಗೊಳಿಸಿದೆ.

ಗುಂಡೇಟಿನಿಂದ ಗಾಯಗೊಂಡ ಜವಾನನನ್ನು ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆಯ ತನಿಖೆಗಾಗಿ ಆದೇಶಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com