ಜಾರ್ಖಂಡ್: ಎನ್ ಕೌಂಟರ್ ನಲ್ಲಿ ಮಾವೋವಾದಿ ಹತ್ಯೆ

ಜಾರ್ಖಂಡ್ ನಲ್ಲಿ ಮಾವೋವಾದಿಗಳ ಗುಂಪಿನ ಸಹ ಸಂಘಟನೆ ಜಾರ್ಖಂಡ್ ಜನ್ ಮುಕ್ತಿ ಪರಿಷತ್ (ಜೆಜೆಎಂಪಿ) ಯ ಓರ್ವ ಮಾವೋವಾದಿಯನ್ನು ಭದ್ರತಾ ಪಡೆಗಳು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿವೆ.
ಜಾರ್ಖಂಡ್: ಎನ್ ಕೌಂಟರ್ ನಲ್ಲಿ ಮಾವೋವಾದಿ ಹತ್ಯೆ
ಜಾರ್ಖಂಡ್: ಎನ್ ಕೌಂಟರ್ ನಲ್ಲಿ ಮಾವೋವಾದಿ ಹತ್ಯೆ

ರಾಂಚಿ: ಜಾರ್ಖಂಡ್ ನಲ್ಲಿ ಮಾವೋವಾದಿಗಳ ಗುಂಪಿನ ಸಹ ಸಂಘಟನೆ ಜಾರ್ಖಂಡ್ ಜನ್ ಮುಕ್ತಿ ಪರಿಷತ್ (ಜೆಜೆಎಂಪಿ) ಯ ಓರ್ವ ಮಾವೋವಾದಿಯನ್ನು ಭದ್ರತಾ ಪಡೆಗಳು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿವೆ.

ಪೊಲೀಸರ ಮಾಹಿತಿಯ ಪ್ರಕಾರ ಈ ಕಾರ್ಯಾಚರಣೆಯಲ್ಲಿ, ಹಲವು ಮಾವೋವಾದಿಗಳು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ  ಸಹಾಯಕ ಕಮಾಂಡೆಂಟ್  ರಾಜೇಶ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ರಾಜೇಶ್ ಕುಮಾರ್ ಅವರನ್ನು ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.

"ಎನ್ ಕೌಂಟರ್ ಪ್ರದೇಶದಿಂದ ಅಧಿಕಾರಿಗಳು ಮೃತ ದೇಹವನ್ನು ವಶಕ್ಕೆ ಪಡೆದಿದ್ದು, ಎಕೆ-47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಜಾರ್ಖಂಡ್ ನ ಪೊಲೀಸ್ ವಕ್ತಾರರಾದ ಎವಿ ಹೋಮ್ಕರ್ ಹೇಳಿದ್ದಾರೆ.

ಮೃತನ ಗುರುತನ್ನು ಇನ್ನೂ ಪತ್ತೆ ಹಚ್ಚಬೇಕಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಪರಾರಿಯಾಗಿರುವ ನಕ್ಸಲರಿಗಾಗಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com