ಪಶ್ಚಿಮ ಬಂಗಾಳ: ಮನಬಂದಂತೆ ಗುಂಡು ಹಾರಿಸಿ ಸಹೋದ್ಯೋಗಿಯನ್ನು ಕೊಂದ ಸಿಐಎಸ್ಎಫ್ ಕಾನ್ಸ್ ಟೇಬಲ್!

 ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ ಟೇಬಲ್ ಓರ್ವ  ಶನಿವಾರ ಸಂಜೆ ತನ್ನ ಎಕೆ-47 ರೈಫಲ್ ನಿಂದ ಮನ ಬಂದಂತೆ ಗುಂಡಿನ ದಾಳಿ ನಡೆಸಿ ಸಹೋದ್ಯೋಗಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.
ಗುಂಡಿನ ದಾಳಿ ನಡೆದ ಸ್ಥಳದಲ್ಲಿರುವ ಪೊಲೀಸರ ಚಿತ್ರ
ಗುಂಡಿನ ದಾಳಿ ನಡೆದ ಸ್ಥಳದಲ್ಲಿರುವ ಪೊಲೀಸರ ಚಿತ್ರ

ಕೊಲ್ಕತ್ತಾ:  ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ ಟೇಬಲ್ ಓರ್ವ  ಶನಿವಾರ ಸಂಜೆ ತನ್ನ ಎಕೆ-47 ರೈಫಲ್ ನಿಂದ ಮನ ಬಂದಂತೆ ಗುಂಡಿನ ದಾಳಿ ನಡೆಸಿ ಸಹೋದ್ಯೋಗಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.

ಕೊಲ್ಕತ್ತಾ ಪೊಲೀಸ್ ಕಮಾಂಡೋಗಳು ಮತ್ತು ಅರೆಸೇನಾ ಪಡೆ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹತ್ಯೆಗೀಡಾದ ಸಿಐಎಸ್ಎಫ್ ಸಿಬ್ಬಂದಿಯನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಂಜಿತ್ ಸರೋಂಗಿ ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ ಸಿಐಎಸ್‌ಎಫ್ ಅಧಿಕಾರಿಯನ್ನು ಎಸ್‌ಎಸ್‌ಕೆಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಸಹಾಯಕ ಕಮಾಂಡೆಂಟ್ ಶ್ರೇಣಿಯ ಅಧಿಕಾರಿ ಸುಬೀರ್ ಘೋಷ್ ಎಂದು ಗುರುತಿಸಲಾಗಿದೆ.

ಗುಂಡಿನ ದಾಳಿಯ ನಂತರ ಮ್ಯೂಸಿಯಂನಲ್ಲಿ ರಕ್ಷಣೆ ಪಡೆದ ಹಂತಕ ಕಾನ್ಸ್ ಟೇಬಲ್ ನನ್ನು  ಕೋಲ್ಕತ್ತಾ ಪೊಲೀಸರ ಕಮಾಂಡೋಗಳು ಮತ್ತು ಇತರ ಸಿಐಎಸ್ಎಫ್ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ, ಆತನ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com