'ನಿಮ್ಮ ಗ್ರಾಮಕ್ಕೆ ಇಮಾಮ್ ಬಂದರೆ ತಕ್ಷಣ ಪೊಲೀಸರಿಗೆ ತಿಳಿಸಿ: ಅಸ್ಸಾಂ ಸಿಎಂ ಹಿಮಂತ್ ಶರ್ಮಾ

ಅಸ್ಸಾಂನಲ್ಲಿ ನೂತನ ಗೈಡ್ ಲೈನ್ಸ್ ಜಾರಿಗೆ ತರಲಾಗಿದ್ದು, ಹಲವರನ್ನು ಹುಬ್ಬೇರುವಂತೆ ಮಾಡಿದೆ. 
ಹಿಮಂತ್ ಬಿಸ್ವಾ ಶರ್ಮಾ
ಹಿಮಂತ್ ಬಿಸ್ವಾ ಶರ್ಮಾ

ದಿಸ್ಪುರ್: ಅಸ್ಸಾಂನಲ್ಲಿ ನೂತನ ಗೈಡ್ ಲೈನ್ಸ್ ಜಾರಿಗೆ ತರಲಾಗಿದ್ದು, ಹಲವರನ್ನು ಹುಬ್ಬೇರುವಂತೆ ಮಾಡಿದೆ. 

ಅಸ್ಸಾಂನ ಯಾವುದೇ ಗ್ರಾಮಕ್ಕೆ ಇಮಾಮ್ ಬಂದರೆ ಮತ್ತು ನಿಮಗೆ ಪರಿಚಯವಿಲ್ಲದಿದ್ದರೆ ತಕ್ಷಣ ಪೊಲೀಸ್ ಠಾಣೆಗೆ ತಿಳಿಸುವಂತೆ ಈ ಮಾರ್ಗದರ್ಶಿಯಲ್ಲಿ ಸೂಚಿಸಲಾಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ನಾವು ಕೆಲವು ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಮಾಡಿದ್ದೇವೆ. ಯಾವುದೇ ಇಮಾಮ್ ನಿಮ್ಮ ಗ್ರಾಮಕ್ಕೆ ಬಂದರೆ ಮತ್ತು ನಿಮಗೆ ಪರಿಚಯವಿಲ್ಲದಿದ್ದರೆ ತಕ್ಷಣ ಪೊಲೀಸ್ ಠಾಣೆಗೆ ತಿಳಿಸಿ, ಅವರು ಪರಿಶೀಲಿಸುತ್ತಾರೆ. 

ಆಗ ಮಾತ್ರ ಅವರು ಗ್ರಾಮದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕ್ರಮದ ಕುರಿತಂತೆ ಅಸ್ಸಾಂನ ನಮ್ಮ ಮುಸ್ಲಿಂ ಸಮುದಾಯವು ಈ ಕೆಲಸದಲ್ಲಿ ನಮಗೆ ಸಹಾಯ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com