social_icon

ಧಾರ್ಮಿಕ ಬೋಧನೆಗಳ ವೈವಿಧ್ಯತೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಎತ್ತಿ ತೋರಿಸಬೇಕು: ಸಂಸದೀಯ ಸಮಿತಿ ಶಿಫಾರಸು

ಕಾರ್ಯತಂತ್ರದ ಪ್ರಾಮುಖ್ಯತೆಯ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಗತಿ, ಧಾರ್ಮಿಕ ಬೋಧನೆಗಳ ವೈವಿಧ್ಯತೆ ಮತ್ತು ಪ್ರಮುಖ ಮಹಿಳಾ ವ್ಯಕ್ತಿಗಳು ಮತ್ತು ಅಸಾಧಾರಣ ವೀರರ ಕೊಡುಗೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಉಲ್ಲೇಖ ಮಾಡಿ ಅವರ ಬಗ್ಗೆ ಮಕ್ಕಳಿಗೆ ಪರಿಚಯ ಬೋಧನೆ ಮಾಡಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.

Published: 20th December 2022 08:07 AM  |   Last Updated: 20th December 2022 08:11 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : sumana
Source : The New Indian Express

ನವದೆಹಲಿ: ಕಾರ್ಯತಂತ್ರದ ಪ್ರಾಮುಖ್ಯತೆಯ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಗತಿ, ಧಾರ್ಮಿಕ ಬೋಧನೆಗಳ ವೈವಿಧ್ಯತೆ ಮತ್ತು ಪ್ರಮುಖ ಮಹಿಳಾ ವ್ಯಕ್ತಿಗಳು ಮತ್ತು ಅಸಾಧಾರಣ ವೀರರ ಕೊಡುಗೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಉಲ್ಲೇಖ ಮಾಡಿ ಅವರ ಬಗ್ಗೆ ಮಕ್ಕಳಿಗೆ ಪರಿಚಯ ಬೋಧನೆ ಮಾಡಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) ಸಮನ್ವಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಪಠ್ಯಪುಸ್ತಕಗಳಲ್ಲಿ ಸಮಾನವಾಗಿ ಒತ್ತು ನೀಡಬೇಕೆಂದು ಸಮಿತಿಯು ಒತ್ತಿಹೇಳಿದೆ.

''ಶಾಲಾ ಪಠ್ಯ ಪುಸ್ತಕಗಳ ವಿಷಯ ಮತ್ತು ವಿನ್ಯಾಸದಲ್ಲಿ ಸುಧಾರಣೆಗಳು” ಕುರಿತು 331 ನೇ ವರದಿಯಲ್ಲಿ ಮಾಡಲಾದ ಶಿಫಾರಸುಗಳು ಮತ್ತು ಅವಲೋಕನಗಳ ಕುರಿತು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸಮಿತಿಯ ವರದಿಯನ್ನು ನಿನ್ನೆ ಸಂಸತ್ತಿನಲ್ಲಿ ಮಂಡಿಸಲಾಯಿತು.

ಹಲವಾರು ವರ್ಷಗಳಿಂದ ಕಡೆಗಣಿಸಲ್ಪಟ್ಟಿರುವ ಸ್ಥಳೀಯ ವೀರರು, ಪುರುಷರು ಮತ್ತು ಮಹಿಳೆಯರು, ಶಾಲಾ ಪಠ್ಯಪುಸ್ತಕಗಳಲ್ಲಿ ದೇಶದ ಇತಿಹಾಸ ಮತ್ತು ಏಕತೆಗೆ ಅವರ ಕೊಡುಗೆಗಳನ್ನು ಪಠ್ಯದಲ್ಲಿ ಒತ್ತು ನೀಡಿ ಉಲ್ಲೇಖಿಸಬೇಕೆಂದು ಸಮಿತಿಯು ಹೇಳಿದೆ.

ಈ ಉದ್ದೇಶಕ್ಕಾಗಿ, ಹೊಸ ಎನ್‌ಸಿಎಫ್ (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು) ಸಿದ್ಧಪಡಿಸುವ ತಳಹದಿಯು ಮುದ್ರಿತ ವಸ್ತುಗಳನ್ನು ಮಾತ್ರವಲ್ಲದೆ ಹಿರಿಯರ ಸಹಾಯದಿಂದ ಸ್ಥಳೀಯ ಮೌಖಿಕ ಸಂಪ್ರದಾಯಗಳು ಮತ್ತು ಜಾನಪದ ಅಧ್ಯಯನದ ಮೂಲಕ ಉಲ್ಲೇಖವನ್ನು ಒಳಗೊಂಡಿರಬಹುದು ಎಂದು ವರದಿ ತಿಳಿಸಿದೆ. ಶಾಲಾ ಪಠ್ಯ ಪುಸ್ತಕಗಳ ವಿಷಯ ಮತ್ತು ವಿನ್ಯಾಸದಲ್ಲಿ ಸುಧಾರಣೆ ಸಮಿತಿ ಹೇಳಿದೆ.

ಎಲ್ಲಾ ಪುರಾತನ ಗ್ರಂಥಗಳಲ್ಲಿ ಹೊರತಂದಿರುವ ಧಾರ್ಮಿಕ ಬೋಧನೆಗಳ ವೈವಿಧ್ಯತೆ ಮತ್ತು ಶಾಲಾ ಪಠ್ಯಪುಸ್ತಕಗಳ ಮೂಲಕ ಶೈಕ್ಷಣಿಕ ಮತ್ತು ಧಾರ್ಮಿಕ ಪಠ್ಯಗಳನ್ನು ಎತ್ತಿ ತೋರಿಸಲು ಇಲಾಖೆಯು ಸಾಕಷ್ಟು ಪ್ರಯತ್ನಗಳನ್ನು ಮಾಡಬಹುದು ಮತ್ತು ಪರಿಷ್ಕೃತ ಎನ್‌ಸಿಎಫ್‌ನಲ್ಲಿ ಅದನ್ನು ಅಳವಡಿಸಬಹುದು ಎಂದು ವರದಿ ಹೇಳಿದೆ.

ವಿಶ್ವದ ಸನ್ನಿವೇಶದಲ್ಲಿ ಭಾರತದ ಉದಯ, ವಿಶೇಷವಾಗಿ ಆರ್ಥಿಕ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯ ಬೆಳಕಿನಲ್ಲಿ, ರಕ್ಷಣಾ ಉತ್ಪಾದನೆ ಮತ್ತು ಒಟ್ಟಾರೆ ಅಭಿವೃದ್ಧಿಯು ಇತರ ದೇಶಗಳಿಗೆ, ವಿಶೇಷವಾಗಿ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿರುವ ದೇಶಗಳಿಗೆ ಹೋಲಿಸಿದರೆ ಸೂಕ್ತವಾಗಿ ಎತ್ತಿ ತೋರಿಸಬಹುದು ಎಂದು ಸಮಿತಿಯು ಹೇಳಿದೆ.

"ಭಾರತ ಮತ್ತು ಇತರ ದೇಶಗಳ ಇತಿಹಾಸಗಳ ನಡುವಿನ ಅಂತರ-ಸಂಪರ್ಕ, ವಿಶೇಷವಾಗಿ ಭಾರತದ ಪೂರ್ವ ನೋಟ ನೀತಿಯ ಸಂದರ್ಭದಲ್ಲಿ, ಶಾಲಾ ಪಠ್ಯಕ್ರಮದಲ್ಲಿ ಪ್ರತಿಫಲಿಸಬಹುದು. ಶಾಲಾ ಇತಿಹಾಸ ಪಠ್ಯಪುಸ್ತಕಗಳಲ್ಲಿ ಸ್ಥಾನವನ್ನು ಕಂಡುಕೊಳ್ಳಬಹುದು" ಎಂದು ಸಂಸದೀಯ ಸಮಿತಿಯ ವರದಿ ಹೇಳಿದೆ.

ಪಠ್ಯಪುಸ್ತಕಗಳು ಮತ್ತು ಇತರ ವಿಷಯಗಳ ಪರಿಶೀಲನೆಗೆ ನಿಯಂತ್ರಕ ಕಾರ್ಯವಿಧಾನವನ್ನು ಹೊಂದುವ ಅವಶ್ಯಕತೆಯಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ನಿಟ್ಟಿನಲ್ಲಿ ಸೂಕ್ತ ಮುಂದಿನ ಕ್ರಮವನ್ನು ತ್ವರಿತವಾಗಿ ಪ್ರಾರಂಭಿಸಲು ಶಿಫಾರಸು ಮಾಡಿದೆ.


Stay up to date on all the latest ದೇಶ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp