
ಖುರ್ದಾ ರೈಲ್ವೆ ನಿಲ್ದಾಣ
ನವದೆಹಲಿ: ರೈಲ್ವೆ ಇಲಾಖೆ 1,000 ಸಣ್ಣ ನಿಲ್ದಾಣಗಳ ಆಧುನೀಕರಣಕ್ಕೆ ಯೋಜನೆ ರೂಪಿಸಿದೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಈ ಆಧುನೀಕರಣ ಕಾಮಗಾರಿ ನಡೆಯಲಿದೆ.
ಇದಷ್ಟೇ ಅಲ್ಲದೇ 200 ದೊಡ್ಡ ನಿಲ್ದಾಣಗಳ ನವೀಕರಣ ಕಾಮಗಾರಿಯ ಯೋಜನೆಯೂ ಪ್ರತ್ಯೇಕವಾಗಿ ಸಿದ್ಧವಿದೆ.
ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸಣ್ಣ ನಿಲ್ದಾಣಗಳನ್ನು ಗುರುತಿಸಿ ಭವಿಷ್ಯದಲ್ಲಿ ನಗರಗಳನ್ನು ಸಂಪರ್ಕಿಸುವ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್ ಎಂ) ಗಳು ಹಂತಹಂತವಾಗಿ ಈ ಆಧುನೀಕರಣದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಇದಕ್ಕಾಗಿ ಡಿಆರ್ ಎಂ ಗಳಿಗೆ ವಿಶೇಷ ಅನುದಾನ ನೀಡಲಾಗುತ್ತದೆ
ಇದನ್ನು ಖುರ್ದಾ ಮಾದರಿಯ ಮರು ನಿರ್ಮಾಣ ಎಂದೇ ಹೇಳಲಾಗುತ್ತಿದೆ. ಒಡಿಶಾದಲ್ಲಿನ ಖುರ್ದಾ ನಿಲ್ದಾಣವನ್ನು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಇದಷ್ಟೇ ಅಲ್ಲದೇ ನಿಲ್ದಾಣದಲ್ಲಿನ ಟ್ರ್ಯಾಕ್ ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಖುರ್ದಾ ನಿಲ್ದಾಣದ ಅಭಿವೃದ್ಧಿಯನ್ನು ವೀಕ್ಷಿಸುವುದಕ್ಕಾಗಿ ಇಲ್ಲಿಗೆ ಡಿಆರ್ ಎಂಗಳು ಭೇಟಿ ನೀಡಿದ್ದರು.