
ದಲಿತರ ಮನೆಯಲ್ಲಿ ಭೋಜನ ಸವಿದ ಸಿಎಂ ಯೋಗಿ ಆದಿತ್ಯನಾಥ್
ಲಖನೌ: ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಲಿತರ ಮನೆಯಲ್ಲಿ ಭೋಜನ ಸವಿದಿದ್ದಾರೆ. ಗೋರಖ್ ಪುರದ ದಲಿತ ಬಿಜೆಪಿ ಕಾರ್ಯಕರ್ತ ಅಮೃತಲ್ ಭಾರ್ತಿ ಅವರ ಮನೆಯಲ್ಲಿ ಭೋಜನ ಸವಿದಿದ್ದಾರೆ. ಈ ವಿಡಿಯೋವನ್ನು ಎಎನ್ ಐ ಸುದ್ದಿಸಂಸ್ಥೆ ಟ್ವೀಟರ್ ನಲ್ಲಿ ಹಂಚಿಕೊಂಡಿದೆ.
#WATCH Uttar Pradesh CM Yogi Adityanath had lunch at the residence of Amritlal Bharti in Gorakhpur
— ANI UP/Uttarakhand (@ANINewsUP) January 14, 2022
"I want to thank Bharti who belongs to Scheduled Caste community for inviting me for 'Khichri Sahbhoj' on the occasion of #MakarSankranti today," the CM says pic.twitter.com/SSIhWglyQE
ನೆಲದ ಮೇಲೆ ಕುಳಿತು ಎಲೆಯಲ್ಲಿ ಬಡಿಸಿದ ಸಾಂಪ್ರಾದಾಯಿಕ ಅನ್ನವನ್ನು ಯೋಗಿ ಆದಿತ್ಯನಾಥ್ ಸೇವಿಸಿದ್ದಾರೆ. ಬಿಜೆಪಿಯ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ ಮಂತ್ರದ ಭಾಗವಾಗಿ ಭಾರ್ತಿ ಅವರ ಮನೆಯಲ್ಲಿ ಭೋಜನ ಸವಿದಿರುವುದಾಗಿ ತಿಳಿಸಿದರು.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಜಾತಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸುತ್ತಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ದಲಿತರ ಮನೆಯಲ್ಲಿ ಭೋಜನ ಸವಿದಿದ್ದಾರೆ.