ಕೇರಳದಲ್ಲಿ ಅನಿವಾಸಿ ಭಾರತೀಯನ ಅಪಹರಿಸಿ ಹತ್ಯೆ ಪ್ರಕರಣ: ಇಬ್ಬರು ಉದ್ಯಮಿಗಳು ಸೇರಿ ಮೂವರ ಬಂಧನ

ವಿದೇಶಿ ಕರೆನ್ಸಿಗಳನ್ನು ವಿದೇಶಕ್ಕೆ ಸಾಗಿಸಿ ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿದ್ದ ಅನಿವಾಸಿ ಭಾರತೀಯನನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತ್ತೆ ಇಬ್ಬರು ಉದ್ಯಮಿಗಳು ಸೇರಿದಂತೆ...
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಕಾಸರಗೋಡು: ವಿದೇಶಿ ಕರೆನ್ಸಿಗಳನ್ನು ವಿದೇಶಕ್ಕೆ ಸಾಗಿಸಿ ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿದ್ದ ಅನಿವಾಸಿ ಭಾರತೀಯನನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತ್ತೆ ಇಬ್ಬರು ಉದ್ಯಮಿಗಳು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಬಂಧಿತ ಆರೋಪಿಗಳನ್ನು ಮಂಜೇಶ್ವರದ ಉದ್ಯಾವರದ ರಿಯಾಸ್ ಹಸನ್ (33), ಉಪ್ಪಳದ ಅಬ್ದುಲ್ ರಝಾಕ್ (46), ಮಂಜೇಶ್ವರದ ಕುಂಜತ್ತೂರಿನ ಅಬೂಬಕರ್ ಸಿದ್ದಿಕ್ (33) ಎಂದು ಗುರುತಿಸಲಾಗಿದೆ.

ಕಳೆದ ಜೂನ್ 26 ರಂದು ಕುಂಬಳ ಪಂಚಾಯತ್ ವ್ಯಾಪ್ತಿಯ ಮುಗುವಿನ ಅನಿವಾಸಿ ಭಾರತೀಯ ಅಬೂಬಕರ್ ಸಿದ್ದಿಕ್(32) ಅವರನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com