ರಾಜ್ಯಸಭೆ ಚುನಾವಣೆ: ರಾಜ್ಯ ಉಸ್ತುವಾರಿ ನಾಯಕರ ನೇಮಕ ಮಾಡಿದ ಬಿಜೆಪಿ, ಕರ್ನಾಟಕಕ್ಕೆ ಕಿಶನ್ ರೆಡ್ಡಿ ಸಾರಥ್ಯ!!
ಕದನ ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ ಭರ್ಜರಿ ಸಿದ್ಧತೆ ನಡೆಸಿದ್ದು, ಇದೀಗ ರಾಜ್ಯಗಳಿಗೆ ಉಸ್ತುವಾರಿ ನಾಯಕರ ನೇಮಕ ಮಾಡಿದೆ.
Published: 01st June 2022 03:05 PM | Last Updated: 01st June 2022 03:05 PM | A+A A-

ಬಿಜೆಪಿ ಸಾಂದರ್ಭಿಕ ಚಿತ್ರ
ನವದೆಹಲಿ: ಕದನ ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ ಭರ್ಜರಿ ಸಿದ್ಧತೆ ನಡೆಸಿದ್ದು, ಇದೀಗ ರಾಜ್ಯಗಳಿಗೆ ಉಸ್ತುವಾರಿ ನಾಯಕರ ನೇಮಕ ಮಾಡಿದೆ.
BJP has appointed Narendra Singh Tomar as in charge of Rajya Sabha elections for Rajasthan, Gajendra Singh Shekhawat for Haryana, G Kishan Reddy for Karnataka, and Ashwini Vaishnaw for Maharashtra. pic.twitter.com/c00hbuWG1B
— ANI (@ANI) June 1, 2022
ಈ ಬಗ್ಗೆ ಬಿಜೆಪಿ ನಾಯಕ ಹಾಗೂ ವಕ್ತಾರ ಅರುಣ್ ಸಿಂಗ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ರಾಜ್ಯಸಭೆ ಚುನಾವಣೆ ನಡೆಯುವ ನಾಲ್ಕು ರಾಜ್ಯಗಳಿಗೆ ಉಸ್ತುವಾರಿ ನಾಯಕರನ್ನು ನೇಮಿಸಿದ್ದಾರೆ. ರಾಜ್ಯಸಭೆ ಚುನಾವಣೆ ನಡೆಯುವ ರಾಜಸ್ಥಾನಕ್ಕೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಹರ್ಯಾಣ ರಾಜ್ಯಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕರ್ನಾಟಕಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಮತ್ತು ಮಹಾರಾಷ್ಟ್ರಕ್ಕೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಉಸ್ತುವಾರಿ ನಾಯಕರಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಮತಗಳ ಕೊರತೆಯ ನಡುವೆಯೂ ನಾಲ್ಕನೇ ಸ್ಥಾನಕ್ಕೆ 3ಪಕ್ಷಗಳ ಅಭ್ಯರ್ಥಿಗಳ ಸೆಣಸಾಟ!
ಕರ್ನಾಟಕದಲ್ಲಿ ಇದೇ ಜೂನ್ 10ರಂದು ರಾಜ್ಯ ಸಭೆ ಚುನಾವಣೆ ನಡೆಯಲಿದೆ.