ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ: ಸುರಕ್ಷಿತ ಸ್ಥಳಗಳಿಗೆ 177 ಕಾಶ್ಮೀರ ಪಂಡಿತ್ ಶಿಕ್ಷಕರ ಸ್ಥಳಾಂತರ!
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಪಂಡಿತರನ್ನು ಗುರಿಯಾಗಿಟ್ಟುಕೊಂಡು ಹತ್ಯೆ ಮಾಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
Published: 04th June 2022 05:40 PM | Last Updated: 04th June 2022 05:40 PM | A+A A-

ಕಾಶ್ಮೀರಿ ಪಂಡಿತರು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಪಂಡಿತರನ್ನು ಗುರಿಯಾಗಿಟ್ಟುಕೊಂಡು ಹತ್ಯೆ ಮಾಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಕಾಶ್ಮೀರಿ ಪಂಡಿತ್ ಸಮುದಾಯದಿಂದ ಬಂದ 177 ಶಿಕ್ಷಕರನ್ನು ಕಣಿವೆಯಿಂದ ಹೊರಗೆ ವರ್ಗಾಯಿಸಲಾಗಿದೆ. ಎಲ್ಲರಿಗೂ ಕಾಶ್ಮೀರದ ಜಿಲ್ಲಾ ಕೇಂದ್ರದಲ್ಲಿ ಪೋಸ್ಟಿಂಗ್ ನೀಡಲಾಗಿದೆ. ಗೃಹ ಸಚಿವಾಲಯದಲ್ಲಿ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಶ್ರೀನಗರದ ಮುಖ್ಯ ಶಿಕ್ಷಣಾಧಿಕಾರಿ ಹೊರಡಿಸಿರುವ ಪತ್ರದಲ್ಲಿ ಎಲ್ಲ ಶಿಕ್ಷಕರ ವರ್ಗಾವಣೆ ಕುರಿತು ಮಾಹಿತಿ ನೀಡಲಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರವು ಕಾಶ್ಮೀರಿ ಪಂಡಿತರ ಕೋಪವನ್ನು ತಣಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಕಣಿವೆಯಲ್ಲಿ ನಡೆಯುತ್ತಿರುವ ನಿರಂತರ ಹತ್ಯೆಗಳಿಂದ ಕಾಶ್ಮೀರಿ ಪಂಡಿತರಲ್ಲಿ ಅಸಮಾಧಾನವಿದೆ.
ಇದನ್ನೂ ಓದಿ: ಕಾಶ್ಮೀರ: ಬದ್ಗಾಮ್ನಲ್ಲಿ ಉಗ್ರರ ದಾಳಿ; ಓರ್ವ ವಲಸೆ ಕಾರ್ಮಿಕ ಸಾವು, ಮತ್ತೊಬ್ಬರಿಗೆ ಗಾಯ
ಮೇ 31 ರಂದು ಸಾಂಬಾದಲ್ಲಿ ಕಾಶ್ಮೀರಿ ಪಂಡಿತ್ ಶಿಕ್ಷಕ ರಜನಿ ಬಾಲಾ ಅವರ ಹತ್ಯೆಯ ನಂತರ ಪ್ರತಿಭಟನೆ ನಡೆಸುತ್ತಿತ್ತು. ಕಾಶ್ಮೀರಿ ಪಂಡಿತರನ್ನು ಜಮ್ಮುವಿಗೆ ವರ್ಗಾಯಿಸಬೇಕು, ಇದರಿಂದ ಸರಣಿ ಹತ್ಯೆಗಳನ್ನು ತಡೆಯಬಹುದು ಎಂಬ ಆಗ್ರಹವನ್ನು ಪ್ರತಿಭಟನಾಕಾರರು ಮಾಡಿದ್ದರು.
ಈ ಮಧ್ಯೆ, “ಜನರ ತಾಳ್ಮೆಯ ಕಟ್ಟೆ ಒಡೆದಿದೆ ಎಂದು ಅನಂತನಾಗ್ನ ಮಟ್ಟಾನ್ನಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತ್ ರಂಜನ್ ಜ್ಯೋತಿಷಿ ಹೇಳಿದ್ದಾರೆ. ನಮ್ಮ ಅನೇಕ ಜನರು ಕೊಲ್ಲಲ್ಪಟ್ಟಿದ್ದಾರೆ. ಸರ್ಕಾರ ನಮ್ಮಿಂದ ಏನು ಬಯಸುತ್ತಿದೆ? ಇಲ್ಲಿ ಭದ್ರತಾ ಪಡೆಗಳೇ ಸುರಕ್ಷಿತವಾಗಿಲ್ಲ, ನಾವು ಹೇಗೆ ಸುರಕ್ಷಿತವಾಗಿರುತ್ತೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿಗಳ ಪ್ಯಾಕೇಜ್ ಮತ್ತು ಪರಿಶಿಷ್ಟ ಜಾತಿಯಂತಹ ವಿಭಾಗಗಳಲ್ಲಿ ಸುಮಾರು 5900 ಹಿಂದೂ ನೌಕರರು ಕಣಿವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 1100 ಜನರು ಟ್ರಾನ್ಸಿಟ್ ಕ್ಯಾಂಪ್ ವಸತಿಗಳಲ್ಲಿ ವಾಸಿಸುತ್ತಿದ್ದರೆ, 4700 ಜನರು ಖಾಸಗಿ ನಿವಾಸಗಳಲ್ಲಿ ವಾಸಿಸುತ್ತಿದ್ದಾರೆ. ನಿರ್ಬಂಧಗಳ ಹೊರತಾಗಿಯೂ, ಖಾಸಗಿ ವಸತಿ ಮತ್ತು ಶಿಬಿರಗಳಲ್ಲಿ ವಾಸಿಸುವ ಶೇಕಡಾ 80 ರಷ್ಟು ಉದ್ಯೋಗಿಗಳು ಕಾಶ್ಮೀರವನ್ನು ತೊರೆದು ಜಮ್ಮು ತಲುಪಿದ್ದಾರೆ. ಅನಂತನಾಗ್, ಬಾರಾಮುಲ್ಲಾ, ಶ್ರೀನಗರದ ಕ್ಯಾಂಪ್ಗಳ ಅನೇಕ ಕುಟುಂಬಗಳು ಪೊಲೀಸ್-ಆಡಳಿತದ ಕಾವಲುಗಾರರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.