‘ನಿಮ್ಮ ದುರಂಹಕಾರ ಇನ್ನು ನಾಲ್ಕೇ ದಿನ, ನಮ್ಮ ರಾಜ ಬರುತ್ತಾನೆ’: ರಾವುತ್ ಮನೆ ಮುಂದೆ ರಾರಾಜಿಸಿದ ಬ್ಯಾನರ್!

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಸರ್ಕಾರಕ್ಕೆ ಶಿವಸೇನೆಯ ಬಂಡುಕೋರ ಶಾಸಕರಿಂದ ಸಂಕಷ್ಟ ಎದುರಾಗಿರುವ ಹೊತ್ತಿನಲ್ಲಿ ಶಿವಸೇನೆ ಉನ್ನತ ನಾಯಕ ಸಂಜಯ್ ರಾವುತ್ ಮನೆ ಮುಂದೆ ಹಾಕಿದ್ದ ಒಂದು ಬ್ಯಾನರ್ ವೈರಲ್ ಆಗಿದೆ.
ಸಂಜಯ್ ರಾವುತ್
ಸಂಜಯ್ ರಾವುತ್

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಸರ್ಕಾರಕ್ಕೆ ಶಿವಸೇನೆಯ ಬಂಡುಕೋರ ಶಾಸಕರಿಂದ ಸಂಕಷ್ಟ ಎದುರಾಗಿರುವ ಹೊತ್ತಿನಲ್ಲಿ ಶಿವಸೇನೆ ಉನ್ನತ ನಾಯಕ ಸಂಜಯ್ ರಾವುತ್ ಮನೆ ಮುಂದೆ ಹಾಕಿದ್ದ ಒಂದು ಬ್ಯಾನರ್ ವೈರಲ್ ಆಗಿದೆ.

ಬ್ಯಾನರ್‌ನಲ್ಲಿ, ‘ನಿಮ್ಮ ದುರಹಂಕಾರವು 4 ದಿನಗಳವರೆಗೆ ಇರುತ್ತದೆ, ನಮ್ಮ ರಾಜ ಬರುತ್ತಾನೆ’ ಎಂದು ಬರೆಯಲಾಗಿದೆ. ಪೋಸ್ಟರ್ ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಾಳಾಸಾಹೇಬ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವುತ್ ಮತ್ತು ಇತರ ಪ್ರಮುಖರ ಚಿತ್ರಗಳನ್ನು ಹಾಕಲಾಗಿದೆ.

ಸಂಜಯ್ ರಾವುತ್ ನಿವಾಸದ ಹೊರಗಿರುವ ಈ ಬ್ಯಾನರ್‌ ಅನ್ನು ಮುಂಬೈ ಮಹಾನಗರ ಪಾಲಿಕೆಯ ಸದಸ್ಯೆ ದೀಪಮಾಲಾ ಬಢೆ ಎನ್ನುವುವರ ಹೆಸರಿನಲ್ಲಿ ಹಾಕಲಾಗಿದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರದ ರಾಜಕೀಯ ಅಸ್ಥಿರತೆ ಕುರಿತಂತೆ ಹಲವು ಬೆಳವಣಿಗೆಗಳು ನಡೆದಿದ್ದು, ಬುಧವಾರ ಮಧ್ಯಾಹ್ನ ಸಿಎಂ ಠಾಕ್ರೆ ಅವರು ರಾಜ್ಯ ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com