ದೇಶದ ಮೂಲಭೂತ ಹಕ್ಕು ಎತ್ತಿ ಹಿಡಿಯದಿರುವುದು ಹಾಸ್ಯಾಸ್ಪದ: ಹಿಜಾಬ್ ತೀರ್ಪಿನ ಬಗ್ಗೆ ಉಮರ್ ಅಬ್ದುಲ್ಲಾ ಟೀಕೆ
ಕೆಲವು ತಿಂಗಳಿಂದ ವಿವಾದಕ್ಕೆ ಕಾರಣಕ್ಕೆ ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ನೀಡಿದ್ದು, ಹಿಜಾಬ್ ಇಸ್ಲಾಂ ಅತ್ಯಗತ್ಯ ಭಾಗವಲ್ಲ ಎಂದು ಹೇಳಿದೆ.
Published: 15th March 2022 12:35 PM | Last Updated: 15th March 2022 02:28 PM | A+A A-

ಒಮರ್ ಅಬ್ದುಲ್ಲಾ
ಜಮ್ಮು: ಕೆಲವು ತಿಂಗಳಿಂದ ವಿವಾದಕ್ಕೆ ಕಾರಣಕ್ಕೆ ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ನೀಡಿದ್ದು, ಹಿಜಾಬ್ ಇಸ್ಲಾಂ ಅತ್ಯಗತ್ಯ ಭಾಗವಲ್ಲ ಎಂದು ಹೇಳಿದೆ.
ತೀರ್ಪಿನ ಕುರಿತಾಗಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅಸಮಾಧಾನಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನ್ಯಾಯಾಲಯ ಮೂಲಭೂತ ಹಕ್ಕನ್ನು ಎತ್ತಿಹಿಡಿಯಲಿಲ್ಲ, ನ್ಯಾಯಾಲಯದ ತೀರ್ಪು ನಗೆಪಾಟಲಿಗೀಡು ಮಾಡುತ್ತಿದೆ ಎಂದು ಹೇಳಿದ್ದಾರೆ.
ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿ, “ಕರ್ನಾಟಕ ಹೈಕೋರ್ಟ್ ತೀರ್ಪಿನಿಂದ ತುಂಬಾ ನಿರಾಶೆಯಾಗಿದೆ. ಹಿಜಾಬ್ ಬಗ್ಗೆ ನ್ಯಾಯಾಲಯ ಯೋಚಿಸುತ್ತಿರುವುದು ಬಟ್ಟೆಯ ಬಗ್ಗೆ ಅಲ್ಲ, ಅದು ಮಹಿಳೆಗೆ ತಾನು ಏನು ಧರಿಸಬೇಕೆಂದು ಆಯ್ಕೆ ಮಾಡುವ ಹಕ್ಕಿನ ಬಗ್ಗೆ. ನ್ಯಾಯಾಲಯವು ಈ ಮೂಲಭೂತ ಹಕ್ಕನ್ನು ಎತ್ತಿಹಿಡಿಯದಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ.
Very disappointed by the verdict of the Karnataka High Court. Regardless of what you may think about the hijab it’s not about an item of clothing, it’s about the right of a woman to choose how she wants to dress. That the court didn’t uphold this basic right is a travesty.
— Omar Abdullah (@OmarAbdullah) March 15, 2022