ತಿರುವನಂತಪುರಂ: ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇವರ ಹಾದಿ ಸುಗಮಗೊಳಿಸುವುದಕ್ಕಾಗಿ ತನ್ನ ನಿಲ್ದಾಣದಿಂದ ಕಾರ್ಯನಿರ್ವಹಿಸುವ ವಿಮಾನಗಳನ್ನು ಕೆಲ ಕಾಲ ಸ್ಥಗಿತಗೊಳಿಸಿತ್ತು.
ವರ್ಷದಲ್ಲಿ ಎರಡು ಬಾರಿ ವಿಮಾನ ನಿಲ್ದಾಣ ಅನಂತಪದ್ಮನಾಭಸ್ವಾಮಿ ದೇವರ ಮೆರವಣಿಗೆ ತನ್ನ ರನ್ ವೇ ಮೂಲಕ ಹಾದು ಹೋಗುವುದಕ್ಕೆ ವಿಮಾನ ನಿಲ್ದಾಣ ತನ್ನ ಎಲ್ಲಾ ವಿಮಾನಗಳ ವೇಳಾಪಟ್ಟಿಯನ್ನು ಮರುನಿಗದಿಗೊಳಿಸಲಿದೆ.
ಕಳೆದ ಒಂದು ದಶಕದಿಂದ ಈ ಪರಿಪಾಠ ನಡೆದುಕೊಂಡುಬಂದಿದ್ದು, ದ್ವೈವಾರ್ಷಿಕ ಆಚರಣೆಗಾಗಿ ವಿಮಾನ ನಿಲ್ದಾಣ ಎರಡು ಬಾರಿ ಈ ಬದಲಾವಣೆ ಮಾಡಿಕೊಳ್ಳಲಿದೆ.
Advertisement