ಶ್ರದ್ಧಾ ವಾಲ್ಕರ್ ಹತ್ಯೆ: ಆರೋಪಿ ಅಫ್ತಾಬ್ ಗೆ ಮತ್ತೆ 4 ದಿನ ಪೊಲೀಸ್ ಕಸ್ಟಡಿ!

ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ಶ್ರದ್ಧಾವಾಲ್ಕರ್ ಹತ್ಯೆ ಪ್ರಕರಣದ ಆರೋಪಿ ಅಪ್ತಾಬ್ ಪೂನಾವಾಲ ನ ಪೊಲೀಸ್ ಕಸ್ಟಡಿ ಅವಧಿಯನ್ನು ದೆಹಲಿ ಕೋರ್ಟ್ ಮತ್ತೆ 4 ದಿನ ವಿಸ್ತರಣೆ ಮಾಡಿದೆ.
ಆರೋಪಿ ಆಫ್ತಾಬ್, ಶ್ರದ್ಧಾ
ಆರೋಪಿ ಆಫ್ತಾಬ್, ಶ್ರದ್ಧಾ

ನವದೆಹಲಿ: ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ಶ್ರದ್ಧಾವಾಲ್ಕರ್ ಹತ್ಯೆ ಪ್ರಕರಣದ ಆರೋಪಿ ಅಪ್ತಾಬ್ ಪೂನಾವಾಲ ನ ಪೊಲೀಸ್ ಕಸ್ಟಡಿ ಅವಧಿಯನ್ನು ದೆಹಲಿ ಕೋರ್ಟ್ ಮತ್ತೆ 4 ದಿನ ವಿಸ್ತರಣೆ ಮಾಡಿದೆ.

ಆರೋಪಿ ಅಫ್ತಾಬ್ ನ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಇಂದು ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಲಯ ಆರೋಪಿಯ ಪೊಲೀಸ್ ಕಸ್ಟಡಿ ಅವಧಿಯನ್ನು ಮತ್ತೆ 4 ದಿನ ವಿಸ್ತರಣೆ ಮಾಡಿದೆ.

ಅಫ್ತಾಬ್ ಪೂನಾವಾಲಾ ಅವರ ಐದು ದಿನಗಳ ಕಸ್ಟಡಿ ಅವಧಿ ಮುಗಿದ ನಂತರ ವಿಶೇಷ ವಿಚಾರಣೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆತನ ಕಸ್ಟಡಿಯನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಿದೆ. ವಿಚಾರಣೆ ವೇಳೆ ಅಫ್ತಾಬ್ ತನ್ನ ಲೈವ್-ಇನ್ ಗೆಳತಿ ಶ್ರದ್ಧಾಳನ್ನು "ಕ್ಷಣದ ಬಿಸಿಯಲ್ಲಿ" ಕೊಂದಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಈಗ ತನ್ನ ಬಗ್ಗೆ ಏನು ಹೇಳಲಾಗುತ್ತಿದೆಯೋ ಅದು ಸಂಪೂರ್ಣವಾಗಿ ನಿಜವಲ್ಲ ಎಂದು ಆತ ಹೇಳಿದ್ದಾನೆ. 

28ರ ವರ್ಷದ ಆರೋಪಿ ಅಫ್ತಾಬ್ ತನಿಖಾಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ ಮತ್ತು ದೆಹಲಿ ಪೊಲೀಸರಿಗೆ ಶ್ರದ್ಧಾ ಅವರ ದೇಹದ ಭಾಗಗಳನ್ನು ಎಸೆದ ಸ್ಥಳದ ನಕ್ಷೆಯನ್ನು ಸಹ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಕುರಿತು ಮಾತನಾಡಿರುವ ಅಫ್ತಾಬ್‌ನ ವಕೀಲ ಅವಿನಾಶ್ ಅವರು, 'ತನಿಖಾ ಅಧಿಕಾರಿಯು ಅಫ್ತಾಬ್‌ನಿಂದ ಶವದ ತುಂಡುಗಳನ್ನು ಎಸೆದಿರುವ ಕೊಳದ ರೇಖಾಚಿತ್ರವನ್ನು ಪಡೆದಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಅಲ್ಲಿಗೆ ಕರೆದೊಯ್ಯಲು ಬಯಸುತ್ತಿರುವುದರಿಂದ ಪೊಲೀಸರು ವಿಸ್ತೃತ ಕಸ್ಟಡಿಗೆ ಕೋರಿದರು. ಆಫ್ತಾಬ್ ಅವರು ಪೊಲೀಸರೊಂದಿಗೆ ಸಹಕರಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ ಮತ್ತು ಪೊಲೀಸರು ಸಹ ಅವರನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ. ಅವರು ಅಧಿಕಾರಿಗಳ ದಾರಿ ತಪ್ಪಿಸುತ್ತಿಲ್ಲ ಅಥವಾ ಅವರಿಗೆ ಸುಳ್ಳು ಹೇಳುತ್ತಿಲ್ಲ.. ಪೊಲೀಸರು ಸಹ ನ್ಯಾಯಾಲಯದಲ್ಲಿ ಅವರ ಹಕ್ಕನ್ನು ವಿರೋಧಿಸಲಿಲ್ಲ ಎಂದು ಅವರು ಹೇಳಿದರು. 

ಅಫ್ತಾಬ್ ಶ್ರದ್ದಾಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ಮನೆಯಲ್ಲಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ. ಬಳಿಕ ಆತ 18 ದಿನಗಳ ಕಾಲ ನಗರದಾದ್ಯಂತ ಸಂಚರಿಸಿ ದೇಹದ ಭಾಗಗಳನ್ನು ಎಸೆದಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com