2019ರ ಜಾಮಿಯಾ ಹಿಂಸಾಚಾರ: ದೆಹಲಿ ಪೊಲೀಸರಿಂದ ವಿವರಣೆ ಕೇಳಿದ ನ್ಯಾಯಾಲಯ

ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಗಲಭೆ, ನರಹತ್ಯೆಗೆ ಯತ್ನ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಪ್ರಕರಣ ದಾಖಲಿಸುವ ಕುರಿತು ನ್ಯಾಯಾಲಯವು ವಾದಗಳನ್ನು ಆಲಿಸುತ್ತಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ಇಲ್ಲಿನ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ತನ್ನ ವರದಿಗಳನ್ನು ಸಲ್ಲಿಸಲು ಸಮಯ ಕೋರಿದ ನಂತರ ಪ್ರಕರಣದ ಕಡತವನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಗಮನಕ್ಕೆ ತರದಿದ್ದಕ್ಕಾಗಿ ದೆಹಲಿ ಪೊಲೀಸರಿಂದ ವಿವರಣೆಯನ್ನು ಕೇಳಿದೆ.

ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಗಲಭೆ, ನರಹತ್ಯೆಗೆ ಯತ್ನ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಪ್ರಕರಣ ದಾಖಲಿಸುವ ಕುರಿತು ನ್ಯಾಯಾಲಯವು ವಾದಗಳನ್ನು ಆಲಿಸುತ್ತಿದೆ.

ಪ್ರಕರಣದಲ್ಲಿ ಶೈಜೀಲ್ ಇಮಾಮ್, ಶರ್ಫೂರ ಜರ್ಗರ್, ಮೊಹಮ್ಮದ್ ಇಲ್ಯಾಸ್, ಬೆಲಾಲ್ ನದೀಮ್, ಶಹಜರ್ ರಜಾ ಖಾನ್, ಮಹಮೂದ್ ಅನ್ವರ್, ಮೊಹಮ್ಮದ್ ಖಾಸಿಂ, ಉಮೈರ್ ಅಹ್ಮದ್, ಚಂದಾ ಯಾದವ್ ಮತ್ತು ಅಬುಜಾರ್ ಆರೋಪಿಗಳಾಗಿದ್ದಾರೆ.

ಎಸ್‌ಪಿಪಿ ಅವರನ್ನು ನೇಮಕ ಮಾಡಿದ್ದರೂ ಈ ಕಡತದ ಬಗ್ಗೆ ಅವರ ಗಮನಕ್ಕೆ ಏಕೆ ತಂದಿಲ್ಲ ಎಂಬ ವಿವರಣೆಯನ್ನು ನೀಡಲು ಈ ಆದೇಶದ ಪ್ರತಿಯನ್ನು ಸಂಬಂಧಿಸಿದ ಡಿಸಿಪಿ ಅಪರಾಧ ವಿಭಾಗಕ್ಕೆ ಕಳುಹಿಸಿ ಮುಂದಿನ ವಿಚಾರಣೆಯ ದಿನಾಂಕದಂದು ವರದಿ ಸಲ್ಲಿಸಬೇಕು ಎಂದು ಸಹಾಯಕ ಸೆಷನ್ಸ್ ನ್ಯಾಯಾಧೀಶರಾದ ಅರುಳ್ ವರ್ಮಾ ಅವರು ಶನಿವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮಧುಕರ್ ಪಾಂಡೆ ಅವರು ಈ ಪ್ರಕರಣದಲ್ಲಿ ಮೊದಲ ಬಾರಿಗೆ ಹಾಜರಾಗುತ್ತಿದ್ದಾರೆ ಮತ್ತು ಪ್ರಕರಣದ ಫೈಲ್ ಅನ್ನು ಇತ್ತೀಚೆಗೆ ಅವರಿಗೆ ಹಸ್ತಾಂತರಿಸಿದ್ದರಿಂದ, ಅವರು ತಮ್ಮ ಸಲ್ಲಿಕೆಗಳನ್ನು ಸಿದ್ಧಪಡಿಸಲು ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದರು.

ಈ ವಿಚಾರವು 2019 ರಿಂದ ಬಾಕಿ ಉಳಿದಿದೆ ಮತ್ತು ಎಸ್‌ಪಿಪಿಯನ್ನು 2021ರ ಜೂನ್ 26 ರಿಂದ ನೇಮಿಸಲಾಗಿದೆ. ಆದರೆ ತನಿಖಾಧಿಕಾರಿ ಅಥವಾ ಸಹಾಯಕ ಪೊಲೀಸ್ ಕಮಿಷನರ್ ಮತ್ತು ಪೊಲೀಸ್ ಉಪ ಆಯುಕ್ತರು ಈ ವಿಷಯವನ್ನು ಅವರ ಗಮನಕ್ಕೆ ತಂದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಹೀಗಾಗಿ ಎಸ್‌ಪಿಪಿ ಅವರು ವಾದ ಮಂಡಿಸಲು ಸ್ವಲ್ಪ ಕಾಲಾವಕಾಶ ಕೋರಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಡಿಸೆಂಬರ್ 13 ರಂದು ನಡೆಯಲಿರುವ ಮುಂದಿನ ವಿಚಾರಣೆಗೆ ಎಸ್‌ಪಿಪಿಗೆ ಸಹಾಯ ಮಾಡಲು ಹಾಜರಾಗುವಂತೆ ಡಿಸಿಪಿ ರಾಜೇಂದ್ರ ಪ್ರಸಾದ್ ಮೀನಾ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com