ಚಂದ್ರಾಪುರ: ಪಾದಚಾರಿ ಮೇಲ್ಸೇತುವೆ ಇದಕ್ಕಿದ್ದಂತೆ ಕುಸಿದಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ. ಬಲ್ಲಾರ್ ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಹಲವು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಹಳೆಯ ಸೇತುವೆ ಇದಾಗಿದ್ದು, ಇದ್ದಕ್ಕಿದ್ದಂತೆ ಚಪ್ಪಡಿಗಳು ಕೆಳಗೆ ಬಿದ್ದಿವೆ. ಇದರಿಂದ ಆತಂಕಕ್ಕೀಡಾದ ಜನರು ಭಯಭೀತಿಯಿಂದ ದಿಕ್ಕಪಾಲಾಗಿ ಓಡಿದ್ದಾರೆ. ಈ ವೇಳೆ 20 ಜನರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement