ಮಗ ಚಾಲಿಸುತ್ತಿದ್ದ ವಾಹನ ನಿಯಂತ್ರಣ ಕಳೆದುಕೊಂಡು ಅಪಘಾತ; ಹೃದಯಾಘಾತದಿಂದ ತಂದೆ ನಿಧನ

ಮಗ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಹೃದಯಾಘಾತಕ್ಕೆ ಒಳಗಾಗಿದ್ದ ಸಾವನ್ನಪ್ಪಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. 
ಅಪಘಾತ (ಸಂಗ್ರಹ ಚಿತ್ರ)
ಅಪಘಾತ (ಸಂಗ್ರಹ ಚಿತ್ರ)

ನವದೆಹಲಿ: ಮಗ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಹೃದಯಾಘಾತಕ್ಕೆ ಒಳಗಾಗಿದ್ದ ಸಾವನ್ನಪ್ಪಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. 

ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ಆತನ ಪುತ್ರ ಕಾರಿನಲ್ಲಿ ಕರೆದೊಯ್ಯುತ್ತಿದ್ದ. ಆದರೆ ದಾದ್ರಿ ಪೊಲೀಸ್ ಠಾಣೆಯ ಬಳಿ ತೆರಳುತ್ತಿದ್ದಂತೆಯೇ ಕಾರು ಅಪಘಾತಕ್ಕೊಳಗಾಗಿದೆ. 

ಬಹ್ಲೋಪುರ ನಿವಾಸಿ ಪ್ರದೀಪ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ತನ್ನ ತಂದೆ ಭೂಪ್ ಸಿಂಗ್ ಹಾಗೂ ಪತ್ನಿ, 9 ತಿಂಗಳ ಮಗಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ ಎಂದು ತಿಳಿಸಿದ್ದಾರೆ 

ಪಚೌಟ ದೇವಸ್ಥಾನಕ್ಕೆ ಭೇಟಿ ನೀಡಿ ನೋಯ್ಡಾಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ತನ್ನ ತಂದೆಗೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಪ್ರದೀಪ್ ವೇಗವಾಗಿ ನೋಯ್ಡಾಗೆ ವಾಪಸ್ಸಾಗುತ್ತಿದ್ದಾಗಿ ಪ್ರದೀಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಮಾರುತಿ ಬ್ರೆಜಾ ಕಾರು ಪೆರಿಫರಲ್ ಎಕ್ಸ್ ಪ್ರೆಸ್ ವೇ ಬಳಿ ನಿಯಂತ್ರಣ ಕಳೆದುಕೊಂಡಿದ್ದು, ಹೆದ್ದಾರಿಯ ಬಳಿ ಇದ್ದ ಹಳ್ಳಕ್ಕೆ ಬಿದ್ದಿದೆ ಘಟನೆಯಲ್ಲಿ ಪ್ರದೀಪ್ ತಂದೆ ಹಾಗೂ ಆತನ ಪತ್ನಿಗೆ ತಿವ್ರವಾದ ಗಾಯಗಳಾಗಿವೆ. ಪ್ರದೀಪ್ ತನ್ನ ತಂದೆಯನ್ನು ಆಸ್ಪತ್ರೆಗೆ ಸೇರಿಸುವ ವೇಳೆಗೆ ಆತ ಮೃತಪಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com