ಉತ್ತರ ಪ್ರದೇಶ: 57 ಲಕ್ಷ ರೂ. ನಷ್ಟ ಭರಿಸುವಂತೆ 60 ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಪೊಲೀಸರ ನೋಟಿಸ್

ಸಿಎಎ ಮತ್ತು ಎನ್ ಆರ್ ಸಿ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉಂಟಾದ  ರೂ. 57 ಲಕ್ಷ ನಷ್ಟ ಕೋರಿ ಇಲ್ಲಿನ  ನಹ್ತಾರ್ ನ ಪೊಲೀಸರು 60 ಜನರಿಗೆ ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆ
ಸಿಎಎ ವಿರೋಧಿ ಪ್ರತಿಭಟನೆ

ಬಿಜ್ನೋರ್: ಸಿಎಎ ಮತ್ತು ಎನ್ ಆರ್ ಸಿ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉಂಟಾದ  ರೂ. 57 ಲಕ್ಷ ನಷ್ಟ ಕೋರಿ ಇಲ್ಲಿನ  ನಹ್ತಾರ್ ನ ಪೊಲೀಸರು 60 ಜನರಿಗೆ ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

2019 ರ ಡಿಸೆಂಬರ್ 20  ರಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉದ್ರಿಕ್ತ ಗುಂಪು ಸರ್ಕಾರಿ ಆಸ್ತಿಯನ್ನು ಹಾನಿಗೊಳಿಸಿದ್ದು, ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿದೆ ಎಂದು ನಹ್ತೌರ್ ಪೊಲೀಸ್ ಠಾಣೆ ಎಸ್‌ಎಚ್‌ಒ ಪಂಕಜ್ ತೋಮರ್ ಹೇಳಿದ್ದಾರೆ.

ಅನಾಸ್ ಮತ್ತು ಸಲ್ಮಾನ್ ಎಂಬ ಇಬ್ಬರು ಯುವಕರು ಸಾವನ್ನಪ್ಪಿದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾದಾಗ ಪೊಲೀಸರ ಮೇಲೂ ಗುಂಪು ಹಲ್ಲೆ ನಡೆಸಿದೆ ಎಂದು ಅವರು ಹೇಳಿದರು.

57 ಲಕ್ಷ ರೂಪಾಯಿ ನಷ್ಟ ಭರಿಸುವಂತೆ ಕೋರಿ 60 ಆರೋಪಿಗಳಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com