ಉತ್ತರಾಖಂಡ್: ಬಸ್ ಕಂದಕಕ್ಕೆ ಉರುಳಿ 25 ಜನರ ದುರ್ಮರಣ, ಹಲವರಿಗೆ ಗಾಯ

ಬಸ್ ಕಂದಕಕ್ಕೆ ಉರುಳಿ 25 ಜನರು ದುರ್ಮರಣ ಹೊಂದಿರುವ ಘಟನೆ ಉತ್ತರಾಖಂಡ್ ರಾಜ್ಯದ ಬಿರೊಖಾಲ್ ಪ್ರದೇಶದಲ್ಲಿ ಗುರುವಾರ ತಡ ರಾತ್ರಿ ಸಂಭವಿಸಿದೆ.
ಕಂದಕಕ್ಕೆ ಉರುಳಿಬಿದ್ದ ಬಸ್
ಕಂದಕಕ್ಕೆ ಉರುಳಿಬಿದ್ದ ಬಸ್

ಉತ್ತರಾಖಂಡ್:  ಬಸ್ ಕಂದಕಕ್ಕೆ ಉರುಳಿ 25 ಜನರು ದುರ್ಮರಣ ಹೊಂದಿರುವ ಘಟನೆ ಉತ್ತರಾಖಂಡ್ ರಾಜ್ಯದ ಬಿರೊಖಾಲ್ ಪ್ರದೇಶದಲ್ಲಿ ಗುರುವಾರ ತಡ ರಾತ್ರಿ ಸಂಭವಿಸಿದೆ.

ಪೊಲೀಸ್ ಮತ್ತು ಎಸ್ ಡಿಆರ್ ಎಫ್ ತಂಡಗಳು 21 ಜನರನ್ನು ರಕ್ಷಿಸಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಮದುವೆ ಸಮಾರಂಭಕ್ಕಾಗಿ 50 ಜನರಿದ್ದ ಬಸ್ ಪೌರಿ ಗಾರ್ ವಾಲ್ ಜಿಲ್ಲೆಯ ಸಿಮ್ದಿ ಗ್ರಾಮದ ಬಳಿ ದೊಡ್ಡ ಕಂದಕಕ್ಕೆ ಉರುಳಿ ಬಿದ್ದಿದೆ.  ಪೊಲೀಸ್ ಮತ್ತು ಎಸ್ ಡಿಆರ್ ಎಫ್ ತಂಡ ಸ್ಥಳದಲ್ಲಿದ್ದು, ಇಂದು ಕೂಡಾ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com