ನವೆಂಬರ್ 8 ರಂದು ಸಿಜೆಐ ನಿವೃತ್ತಿ; ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಸರ್ಕಾರ ಪತ್ರ

ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ಸಿಜೆಐ ಉದಯ್ ಉಮೇಶ್ ಲಲಿತ್
ಸಿಜೆಐ ಉದಯ್ ಉಮೇಶ್ ಲಲಿತ್

ನವದೆಹಲಿ: ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಈ ಪತ್ರವನ್ನು ಇಂದು ಬೆಳಿಗ್ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಕಾರ್ಯವಿಧಾನದ ಭಾಗವಾಗಿ, ಕಾನೂನು ಸಚಿವರು ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯುತ್ತಾರೆ.

ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ 8 ರಂದು ಸಿಜೆಐ ನಿವೃತ್ತರಾಗುತ್ತಾರೆ.

ಸಿಜೆಐ ಲಲಿತ್ ಅವರ ನಂತರ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ. ಅಭ್ಯಾಸದ ಪ್ರಕಾರ, ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಸಿಜೆಐ ತನ್ನ ಉತ್ತರಾಧಿಕಾರಿ ಎಂದು ಹೆಸರಿಸುತ್ತಾರೆ.

ಸ್ಥಾಪಿತ ಅಭ್ಯಾಸ ಮತ್ತು ಸಂಪ್ರದಾಯದ ಪ್ರಕಾರ, ನ್ಯಾಯಮೂರ್ತಿ ಚಂದ್ರಚೂಡ್ 50ನೇ ಸಿಜೆಐ ಆಗಲಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com