ನವದೆಹಲಿ: ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ, ಗಣೇಶ ಚಿತ್ರ ಮುದ್ರಿಸಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಜ್ರಿವಾಲ್ ಅರಾಜಕತೆಯ ಸಂಕೇತವಾಗಿದ್ದಾರೆ. ಹೊಸ ಪ್ರಚಾರ ತಂತ್ರದ ಮೂಲಕ ಅವರ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯದಂತೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿರುವ ಮುಸ್ಲಿಂ ಧರ್ಮಗಳಿಗೆ 18,000 ರೂ. ನೀಡುವ ಅರವಿಂದ್ ಕೇಜ್ರಿವಾಲ್ ಅಷ್ಟೇ ಹಣವನ್ನು ಆರ್ಚಕರು, ಗುರುದ್ವಾರದ ಗ್ರಂಥಿಗಳು, ಪಾದ್ರಿಗಳಿಗೂ ನೀಡಲಿ, ಏಕೆ ನೀಡುತ್ತಿಲ್ಲ ಎಂದು ಅವರು ತೀವ್ರ ಟೀಕಾ ಪ್ರಹಾರ ನಡೆಸಿದರು.
Advertisement