ಭೀಕರ ವಿಡಿಯೋ: ಮಹಿಳೆಯ ಕತ್ತು ಸೀಳಲು ಯತ್ನಿಸಿದ ಟಿಆರ್ ಎಸ್ ಮುಖಂಡ!

ಹೈದರಾಬಾದ್‌ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಮುಖಂಡನೊಬ್ಬ ಮಹಿಳೆ ಮೇಲೆ ಹಲ್ಲೆ ನಡೆಸಿ ಕತ್ತು ಸೀಳಲು ಯತ್ನಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಜಯ್ ಸಿನ್ಹಾ ರೆಡ್ಡಿ
ವಿಜಯ್ ಸಿನ್ಹಾ ರೆಡ್ಡಿ

ಹೈದರಾಬಾದ್‌: ಹೈದರಾಬಾದ್‌ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಮುಖಂಡನೊಬ್ಬ ಮಹಿಳೆ ಮೇಲೆ ಹಲ್ಲೆ ನಡೆಸಿ ಕತ್ತು ಸೀಳಲು ಯತ್ನಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹೈದರಾಬಾದ್‌ನ ಪಂಜಗುಟ್ಟಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿಶಾ (35) ಎಂಬ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಮುಖಂಡ ವಿಜಯ್ ಸಿನ್ಹಾ ರೆಡ್ಡಿ ಈ ದುಷ್ಕೃತ್ಯ ಎಸಗಿರುವುದಾಗಿ ಪತಿ ಆರೋಪಿಸಿದ್ದಾರೆ.

ಪಂಜಗುಟ್ಟಾ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ಚಂದ್ರ ರೆಡ್ಡಿ ಮಾತನಾಡಿ, ಎಫ್ ಐಆರ್ ದಾಖಲಿಸಿ ಐಪಿಸಿ ಸೆಕ್ಷನ್ 448, 324, 354(ಎ) 506 ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಿಶಾ ಕುತ್ತಿಗೆಯ ಮೇಲೆ ಕತ್ತರಿಸಿ ಉಂಟಾದ ಗಾಯದ ನೋವಿನಿಂದ ನರಳುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸೋಮವಾರ ಮುಂಜಾನೆ ವಿಜಯ್  ಸಿನ್ಹಾ ರೆಡ್ಡಿ ಪತ್ನಿಯ ಕತ್ತು ಕೊಯ್ಯಲು ಯತ್ನಿಸಿದ್ದ ಎಂದು ಮಹಿಳೆಯ ಪತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com