ತೆಲಂಗಾಣ: ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ಬಂಧನ

ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕರೀಮ್‌ನಗರದಲ್ಲಿರುವ ನಿವಾಸದಲ್ಲಿ ಸಂಜಯ್‌ ಕುಮಾರ್‌ ಅವರನ್ನು ಬುಧವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ .
ಬಂಡಿ ಸಂಜಯ್
ಬಂಡಿ ಸಂಜಯ್

ತೆಲಂಗಾಣ: ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.  ಕರೀಮ್‌ನಗರದಲ್ಲಿರುವ ನಿವಾಸದಲ್ಲಿ ಸಂಜಯ್‌ ಕುಮಾರ್‌ ಅವರನ್ನು ಬುಧವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ .

ತೆಲಂಗಾಣ ರಾಜ್ಯ ಸಾರ್ವಜನಿಕ ಸೇವಾ ಆಯೋಗ ಮತ್ತು 10ನೇ ತರಗತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಇದಕ್ಕೆ ಸಿಎಂ ಕೆ.ಚಂದ್ರಶೇಖರ್ ರಾವ್​ ಅವರ ಸರ್ಕಾರವೇ ನೇರಹೊಣೆ ಎಂದು ಆರೋಪಿಸಿದ್ದ ಬಂಡಿ ಸಂಜಯ್ ಕುಮಾರ್​, ‘ಇದರಲ್ಲಿ ನೇರ ಪ್ರಭಾವ ಇರುವುದು ಮುಖ್ಯಮಂತ್ರಿ ಕೆಸಿಆರ್​ ಮತ್ತು ಅವರ ಪುತ್ರ ಕೆಟಿಆರ್​ ಅವರೇ ಹೊಣೆ. ಹೀಗಾಗಿ ಅವರಿಬ್ಬರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದೀಗ ಅದೇ ಆರೋಪದಡಿ ಬಂಡಿ ಸಂಜಯ್ ಅವರನ್ನೇ ಬಂಧಿಸಲಾಗಿದೆ ಎನ್ನಲಾಗಿದೆ.

ತಡರಾತ್ರಿ 12.47ರ ಹೊತ್ತಿಗೆ ಬಂಡಿ ಸಂಜಯ್​ ಅವರ ಟ್ವಿಟರ್​ ಅಕೌಂಟ್​​ನಲ್ಲಿ, ಅವರ ಬಂಧನದ ದೃಶ್ಯಗಳನ್ನು ಪೋಸ್ಟ್ ಮಾಡಲಾಗಿದೆ. ಹಾಗೇ, ‘ಭಾರತ್​ ರಾಷ್ಟ್ರ ಸಮಿತಿ ಪಕ್ಷದಲ್ಲಿ ಭಯ ಮನೆ ಮಾಡಿದೆ. ಮೊದಲು ನಾನು ಸುದ್ದಿಗೋಷ್ಠಿ ನಡೆಸುವುದನ್ನು ತಪ್ಪಿಸಿದರು.

ರಾತ್ರೋರಾತ್ರಿ ಬಂದು ಅರೆಸ್ಟ್ ಮಾಡಿದರು. ಬಿಆರ್​ಎಸ್​ ಸರ್ಕಾರ ಮಾಡುತ್ತಿರುವ ತಪ್ಪುಗಳನ್ನು ಪ್ರಶ್ನಿಸುತ್ತಿರುವುದೇ ನಾನು ಮಾಡುತ್ತಿರುವ ಪ್ರಮಾದ. ನಾನು ಜೈಲಿನಲ್ಲಿದ್ದರೂ ಸರಿ, ಬಿಆರ್​ಎಸ್​ ಪಕ್ಷದ ಭ್ರಷ್ಟಾಚಾರ, ತಪ್ಪುಗಳನ್ನು ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಕೂಡ ಟ್ವೀಟ್​ ಮಾಡಲಾಗಿದೆ.

‘ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್​, ಜೈ ತೆಲಂಗಾಣ’ ಎಂದೂ ಬರೆದಿದ್ದಾರೆ. ಏಪ್ರಿಲ್​ 8ರಂದು ತೆಲಂಗಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಡಲಿದ್ದಾರೆ. ಅದಕ್ಕೂ ಪೂರ್ವ ಬಿಜೆಪಿ ರಾಜ್ಯಾಧ್ಯಕ್ಷನ ಬಂಧನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com