ಪಾಟ್ನಾ: ಬಿಹಾರದ ಬೆಟ್ಟಿಯ ಮಜೌಲಿಯಾ ನಿಲ್ದಾಣದ ಬಳಿ ಸತ್ಯಾಗ್ರಹ ಎಕ್ಸ್ಪ್ರೆಸ್ ರೈಲಿನ ಐದು ಬೋಗಿಗಳು ಇಂಜಿನ್ನಿಂದ ಬೇರ್ಪಟ್ಟ ಘಟನೆ ನಡೆದಿದೆ. ಮುಜಾಫರ್ಪುರ-ನರ್ಕಟಿಯಾಗಂಜ್ ರೈಲ್ವೆ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಈಸ್ಟ್ ಸೆಂಟ್ರಲ್ ರೈಲ್ವೇ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಬಿಹಾರದ ರಕ್ಸಾಲ್ ಜಿಲ್ಲೆಯಿಂದ ನವದೆಹಲಿಗೆ ಚಲಿಸುವ ರೈಲಿನ ಬೋಗಿಗಳನ್ನು ಮರು ಜೋಡಿಸಿದ್ದಾರೆ. ಈ ಬಗ್ಗೆ ಪೂರ್ವ ಕೇಂದ್ರ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ವರದಿಯ ಪ್ರಕಾರ, ಎರಡು ಬೋಗಿಗಳನ್ನು ಒಟ್ಟಿಗೆ ಜೋಡಿಸಲು ಬಳಸುವ ಕಪ್ಲಿಂಗ್ನ ಅಸಮರ್ಪಕ ಕಾರ್ಯದಿಂದಾಗಿ, ಬೋಗಿಗಳು ಎಂಜಿನ್ನಿಂದ ಬೇರ್ಪಟ್ಟಿವೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬೋಗಿಯಿಂದ ಬೇರ್ಪಟ್ಟ ನಂತರ ಎಂಜಿನ್ ಹಲವು ಕಿಲೋಮೀಟರ್ ದೂರ ಸಾಗಿದೆ. ಆದರೆ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement