ಬಿಹಾರ: ಇಂಜಿನ್‌ನಿಂದ ಬೇರ್ಪಟ್ಟ ಸತ್ಯಾಗ್ರಹ ಎಕ್ಸ್‌ಪ್ರೆಸ್‌ ರೈಲಿನ ಐದು ಬೋಗಿಗಳು

ಬಿಹಾರದ ಬೆಟ್ಟಿಯ ಮಜೌಲಿಯಾ ನಿಲ್ದಾಣದ ಬಳಿ ಸತ್ಯಾಗ್ರಹ ಎಕ್ಸ್‌ಪ್ರೆಸ್ ರೈಲಿನ ಐದು ಬೋಗಿಗಳು ಇಂಜಿನ್‌ನಿಂದ ಬೇರ್ಪಟ್ಟ ಘಟನೆ ನಡೆದಿದೆ. ಮುಜಾಫರ್‌ಪುರ-ನರ್ಕಟಿಯಾಗಂಜ್ ರೈಲ್ವೆ ವಿಭಾಗದಲ್ಲಿ ಈ ಘಟನೆ ನಡೆದಿದ್ದು...
ಬೇರ್ಪಟ್ಟ ಬೋಗಿ
ಬೇರ್ಪಟ್ಟ ಬೋಗಿ

ಪಾಟ್ನಾ: ಬಿಹಾರದ ಬೆಟ್ಟಿಯ ಮಜೌಲಿಯಾ ನಿಲ್ದಾಣದ ಬಳಿ ಸತ್ಯಾಗ್ರಹ ಎಕ್ಸ್‌ಪ್ರೆಸ್ ರೈಲಿನ ಐದು ಬೋಗಿಗಳು ಇಂಜಿನ್‌ನಿಂದ ಬೇರ್ಪಟ್ಟ ಘಟನೆ ನಡೆದಿದೆ. ಮುಜಾಫರ್‌ಪುರ-ನರ್ಕಟಿಯಾಗಂಜ್ ರೈಲ್ವೆ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.

ಈಸ್ಟ್ ಸೆಂಟ್ರಲ್ ರೈಲ್ವೇ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಬಿಹಾರದ ರಕ್ಸಾಲ್ ಜಿಲ್ಲೆಯಿಂದ ನವದೆಹಲಿಗೆ ಚಲಿಸುವ ರೈಲಿನ ಬೋಗಿಗಳನ್ನು ಮರು ಜೋಡಿಸಿದ್ದಾರೆ. ಈ ಬಗ್ಗೆ ಪೂರ್ವ ಕೇಂದ್ರ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ವರದಿಯ ಪ್ರಕಾರ, ಎರಡು ಬೋಗಿಗಳನ್ನು ಒಟ್ಟಿಗೆ ಜೋಡಿಸಲು ಬಳಸುವ ಕಪ್ಲಿಂಗ್‌ನ ಅಸಮರ್ಪಕ ಕಾರ್ಯದಿಂದಾಗಿ, ಬೋಗಿಗಳು ಎಂಜಿನ್‌ನಿಂದ ಬೇರ್ಪಟ್ಟಿವೆ.

ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬೋಗಿಯಿಂದ ಬೇರ್ಪಟ್ಟ ನಂತರ ಎಂಜಿನ್ ಹಲವು ಕಿಲೋಮೀಟರ್ ದೂರ ಸಾಗಿದೆ. ಆದರೆ, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com