ಭಾರತ ಪರಂಪರೆ, ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ: ಪ್ರಧಾನಿ ನರೇಂದ್ರ ಮೋದಿ

ಭಾರತವು ಪ್ರಚಂಡ ಸ್ವಾಭಿಮಾನದಿಂದ ತನ್ನ ಪರಂಪರೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದೆ ಮತ್ತು ಆಧುನಿಕತೆಗೆ ನಾಂದಿ ಹಾಡುವುದರೊಂದಿಗೆ ತನ್ನ ಸಂಪ್ರದಾಯಗಳನ್ನು ಬಲಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿಯವರಿಗೆ ಫೊಟೊ ನೀಡಿದ ಗುಜರಾತ್ ರಾಜ್ಯಪಾಲ ಆಚಾರ್ಯ ದೇವರಾತ್.
ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿಯವರಿಗೆ ಫೊಟೊ ನೀಡಿದ ಗುಜರಾತ್ ರಾಜ್ಯಪಾಲ ಆಚಾರ್ಯ ದೇವರಾತ್.

ನವದೆಹಲಿ: ಭಾರತವು ಪ್ರಚಂಡ ಸ್ವಾಭಿಮಾನದಿಂದ ತನ್ನ ಪರಂಪರೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದೆ ಮತ್ತು ಆಧುನಿಕತೆಗೆ ನಾಂದಿ ಹಾಡುವುದರೊಂದಿಗೆ ತನ್ನ ಸಂಪ್ರದಾಯಗಳನ್ನು ಬಲಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ದೇಶದ ನೀತಿಗಳು ಮತ್ತು ಪ್ರಯತ್ನಗಳಲ್ಲಿ ಯಾವುದೇ ತಾರತಮ್ಯವಿಲ್ಲ. ಬಡವರು, ಹಿಂದುಳಿದವರು ಮತ್ತು ವಂಚಿತರಿಗೆ ಆದ್ಯತೆಯ ಮೇಲೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿವೆ ಎಂದು ಅವರು ಹೇಳಿದರು.

ಸಮಾಜ ಸುಧಾರಕ ಮತ್ತು ಆರ್ಯ ಸಮಾಜದ ಸಂಸ್ಥಾಪಕ ದಯಾನಂದ ಸರಸ್ವತಿ ಅವರ 200ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ನಂತರ ಮೋದಿ ಈ ಹೇಳಿಕೆಗಳನ್ನು ನೀಡಿದರು. ಜನ್ಮ ವಾರ್ಷಿಕೋತ್ಸವದ ಲಾಂಛನವನ್ನೂ ಪ್ರಧಾನಿ ಅನಾವರಣಗೊಳಿಸಿದರು.

ಪರಿಸರ ಕ್ಷೇತ್ರದಲ್ಲಿ ಭಾರತ ಜಗತ್ತಿಗೆ ದಾರಿ ತೋರಿಸುತ್ತಿದೆ. ಈ ವರ್ಷ ಭಾರತವು ಜಿ20 ಅಧ್ಯಕ್ಷನಾಗಿರುವುದು ಹೆಮ್ಮೆಯ ವಿಚಾರ. ಪ್ರಚಂಡ ಸ್ವಾಭಿಮಾನ ಹೊಂದಿರುವ ದೇಶ ಇಂದು ತನ್ನ ಪರಂಪರೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದೆ. ಆಧುನಿಕತೆಗೆ ನಾಂದಿ ಹಾಡುವುದರೊಂದಿಗೆ ನಮ್ಮ ಸಂಪ್ರದಾಯಗಳನ್ನು ಬಲಪಡಿಸುತ್ತೇವೆ ಎಂದು ದೇಶ ಸಂಪೂರ್ಣ ಆತ್ಮವಿಶ್ವಾಸದಿಂದ ಹೇಳುತ್ತಿದೆ ಎಂದು ಮೋದಿ ಹೇಳಿದರು.

ದೇಶವು 'ವಿರಾಸತ್ (ಪರಂಪರೆ)' ಮತ್ತು 'ವಿಕಾಸ್ (ಅಭಿವೃದ್ಧಿ)' ಹಾದಿಯಲ್ಲಿ ಸಾಗುತ್ತಿದೆ. ಕರ್ತವ್ಯದ ಹಾದಿಯಲ್ಲಿ ನಡೆಯುವ ಬಗ್ಗೆ ಮಾತನಾಡುವಾಗ, ಕೆಲವರು ಕರ್ತವ್ಯದ ಬಗ್ಗೆ ಮಾತನಾಡುತ್ತಾರೆ ಆದರೆ, ಹಕ್ಕುಗಳ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಾರೆ. 21ನೇ ಶತಮಾನದಲ್ಲಿ ನನ್ನದೇ ಪರಿಸ್ಥಿತಿ ಹೀಗಿರುವಾಗ, 150 ವರ್ಷಗಳ ಹಿಂದೆ ಸ್ವಾಮಿ ದಯಾನಂದರು ಸಮಾಜಕ್ಕೆ ದಾರಿ ತೋರಿಸುವಲ್ಲಿ ಎಂತಹ ಕಷ್ಟಗಳನ್ನು ಎದುರಿಸುತ್ತಿದ್ದರು ಎಂಬುದನ್ನು ಊಹಿಸಿಕೊಳ್ಳಿ ಎಂದರು.

ಮಹರ್ಷಿ ದಯಾನಂದ ಸರಸ್ವತಿ ಅವರು ತೋರಿದ ಮಾರ್ಗವು ಕೋಟ್ಯಂತರ ಜನರಲ್ಲಿ ಭರವಸೆ ಮೂಡಿಸಿದೆ ಎಂದ ಅವರು, ಈ ಸಂದರ್ಭವನ್ನು ಐತಿಹಾಸಿಕ ಎಂದು ಕರೆದರು ಮತ್ತು ಇದು ಮಾನವೀಯತೆಯ ಭವಿಷ್ಯಕ್ಕೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಮಹರ್ಷಿ ದಯಾನಂದ ಸರಸ್ವತಿ ಅವರು ಭಾರತದ ಮಹಿಳೆಯರ ಸಬಲೀಕರಣಕ್ಕಾಗಿ ಧ್ವನಿಯಾದರು ಮತ್ತು ಸಾಮಾಜಿಕ ತಾರತಮ್ಯ ಮತ್ತು ಅಸ್ಪೃಶ್ಯತೆ ವಿರುದ್ಧ ಪ್ರಬಲ ಅಭಿಯಾನವನ್ನು ಪ್ರಾರಂಭಿಸಿದರು. ಇಂದು ದೇಶದ ಹೆಣ್ಣುಮಕ್ಕಳು ಸಿಯಾಚಿನ್‌ನಲ್ಲಿ ನಿಯೋಜಿಸುವುದರಿಂದ ಹಿಡಿದು ರಫೇಲ್ ಯುದ್ಧ ವಿಮಾನಗಳನ್ನು ಹಾರಿಸುವವರೆಗೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.

1824 ರಲ್ಲಿ ಜನಿಸಿದ ದಯಾನಂದ ಸರಸ್ವತಿಗಳು ಅಂದಿನ ಪ್ರಚಲಿತ ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸಲು ಕೆಲಸ ಮಾಡಿದರು.

ಆರ್ಯ ಸಮಾಜವು ಸಾಮಾಜಿಕ ಸುಧಾರಣೆಗಳು ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com