ತೆಲಂಗಾಣ ಅಫ್ಘಾನಿಸ್ತಾನವಾಗಿದೆ, ಕೆಸಿಆರ್ ತಾಲಿಬಾನ್: ವೈ ಎಸ್ ಶರ್ಮಿಳಾ

ತೆಲಂಗಾಣ ಭಾರತದ ಅಫ್ಘಾನಿಸ್ತಾನವಾಗಿದ್ದು, ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ತಾಲಿಬಾನ್ ರೀತಿ ವರ್ತಿಸುತ್ತಿದ್ದಾರೆ ಎಂದು ಯುವಜನ ಶ್ರಮಿಕ ರೈತ ತೆಲಂಗಾಣ ಪಕ್ಷ(ವೈಎಸ್‌ಆರ್‌ಟಿಪಿ)ದ ಮುಖ್ಯಸ್ಥೆ ವೈ ಎಸ್ ಶರ್ಮಿಳಾ...
ವೈ ಎಸ್ ಶರ್ಮಿಳಾ
ವೈ ಎಸ್ ಶರ್ಮಿಳಾ

ಹೈದರಾಬಾದ್: ತೆಲಂಗಾಣ ಭಾರತದ ಅಫ್ಘಾನಿಸ್ತಾನವಾಗಿದ್ದು, ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ತಾಲಿಬಾನ್ ರೀತಿ ವರ್ತಿಸುತ್ತಿದ್ದಾರೆ ಎಂದು ಯುವಜನ ಶ್ರಮಿಕ ರೈತ ತೆಲಂಗಾಣ ಪಕ್ಷ(ವೈಎಸ್‌ಆರ್‌ಟಿಪಿ)ದ ಮುಖ್ಯಸ್ಥೆ ವೈ ಎಸ್ ಶರ್ಮಿಳಾ ಅವರು ಭಾನುವಾರ ಆರೋಪಿಸಿದ್ದಾರೆ.

ಮೆಹಬೂಬಾಬಾದ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶರ್ಮಿಳಾ, "ಅವರು (ಕೆಸಿಆರ್) ಸರ್ವಾಧಿಕಾರಿ, ನಿರಂಕುಶಾಧಿಕಾರಿ. ತೆಲಂಗಾಣದಲ್ಲಿ ಭಾರತೀಯ ಸಂವಿಧಾನವಿಲ್ಲ. ಕೆಸಿಆರ್ ಅವರ ಸಂವಿಧಾನವಿದೆ. ತೆಲಂಗಾಣ ಭಾರತದ ಅಫ್ಘಾನಿಸ್ತಾನ ಮತ್ತು ಕೆಸಿಆರ್ ಅದರ ತಾಲಿಬಾನ್" ಎಂದು ವಾಗ್ದಾಳಿ ನಡೆಸಿದರು.

ಮೆಹಬೂಬಾಬಾದ್ ಶಾಸಕ ಮತ್ತು ಭಾರತ್ ರಾಷ್ಟ್ರ ಸಮಿತಿ ನಾಯಕ ಶಂಕರ್ ನಾಯಕ್ ವಿರುದ್ಧ ಅನುಚಿತ ಹೇಳಿಕೆ ನೀಡಿದ ಆರೋಪದ ಮೇಲೆ ತೆಲಂಗಾಣ ಪೊಲೀಸರು ಶರ್ಮಿಳಾ ಅವರನ್ನು ಭಾನುವಾರ ಬಂಧಿಸಿದ್ದರು.

ನಂತರ ಮೆಹಬೂಬಾಬಾದ್ ಪಟ್ಟಣದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಪೊಲೀಸರು ಶರ್ಮಿಳಾ ಅವರನ್ನು ಹೈದರಾಬಾದ್‌ಗೆ ಸ್ಥಳಾಂತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com