ಸ್ಕೂಟರ್ ಗೆ ಡಿಕ್ಕಿ ಹೊಡೆದು ವ್ಯಕ್ತಿಯನ್ನು 1.5 ಕಿ.ಮೀ ಎಳೆದೊಯ್ದ ಟ್ರಕ್!

ಭೀಕರ ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೋಲ್ಕತ್ತಾದ ಸಿಲಿಗುರಿಯಲ್ಲಿ ಡಂಪರ್ ಟ್ರಕ್ ಸ್ಕೂಟರ್ ಗೆ ಡಿಕ್ಕಿ ಹೊಡೆದು ವ್ಯಕ್ತಿಯನ್ನು 1.5 ಕಿ.ಮೀ ಎಳೆದೊಯ್ದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ್ತ: ಭೀಕರ ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೋಲ್ಕತ್ತಾದ ಸಿಲಿಗುರಿಯಲ್ಲಿ ಡಂಪರ್ ಟ್ರಕ್ ಸ್ಕೂಟರ್ ಗೆ ಡಿಕ್ಕಿ ಹೊಡೆದು ವ್ಯಕ್ತಿಯನ್ನು 1.5 ಕಿ.ಮೀ ಎಳೆದೊಯ್ದಿದೆ.
 
ದೆಹಲಿ ಹಾಗೂ ಉತ್ತರ ಪ್ರದೇಶಗಳಲ್ಲಿ ಕಳೆದ 2-3 ದಿನಗಳಿಂದ ಇದೇ ಮಾದರಿಯ ಅಪಘಾತಗಳು ಸಂಭವಿಸಿದ್ದು ಕಾರು ಹಾಗೂ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರರು ಟ್ರಕ್ ಗೆ ಸಿಲುಕಿ ಹಲವು ಕಿ.ಮೀ ದೂರದ ವರೆಗೆ ಎಳೆದೊಯ್ಯಲ್ಪಟ್ಟು ಸಾವನ್ನಪ್ಪಿದ್ದಾರೆ. 

ಗುರುವಾರದಂದು ರಾತ್ರಿ 8:30 ಕ್ಕೆ ಉತ್ತರ ಬಂಗಾಳ ಕ್ಯಾಂಪಸ್ ನಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಅನಂತ ದಾಸ್ ಎಂದು ಗುರುತಿಸಲಾಗಿದೆ ಆತ ಮನೆಗೆ ತೆರಳುತ್ತಿದ್ದಾಗ ಡಂಪರ್ ಟ್ರಕ್ ಬಂದು ದ್ವಿಚಕ್ರವಾಹನಕ್ಕೆ ಢಿಕ್ಕಿ ಹೊಡೆದಿದೆ.

ಮೃತ ದಾಸ್ ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದು, ಟ್ರಕ್ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಸ್ಕೂಟರ್ ಟ್ರಕ್ ನ ಬದಿಗೆ ಸಿಲುಕಿಕೊಂಡಿದೆ ಪರಿಣಾಮ 1.5 ಕಿ.ಮೀ ವರೆಗೆ ದೇಹ ಎಳೆದೊಯ್ಯಲ್ಪಟ್ಟಿದೆ. 

ಅಪಘಾತದ ವೇಗಕ್ಕೆ ದ್ವಿಚಕ್ರವಾಹನ ಬೆಂಕಿ ಹೊತ್ತಿಕೊಂಡಿದ್ದು ದೇಹವೂ ಸುಟ್ಟಿದೆ. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರಾದರೂ ಆ ವೇಳೆಗೆ ದಾಸ್ ಮೃತಪಟ್ಟಿದ್ದರು. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com