ಲಖಿಂಪುರ-ಖೇರಿ ಪ್ರಕರಣ: ಆರೋಪಿ ಆಶಿಶ್ ಮಿಶ್ರಾ ಜೈಲಿನಿಂದ ಬಿಡುಗಡೆ- ವಿಡಿಯೋ 

ಉತ್ತರ ಪ್ರದೇಶದ ಲಖಿಂಪುರ-ಖೇರಿ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಆಶಿಶ್ ಮಿಶ್ರಾ
ಆಶಿಶ್ ಮಿಶ್ರಾ

ಲಕ್ಕಿಂಪುರ: ಉತ್ತರ ಪ್ರದೇಶದ ಲಖಿಂಪುರ-ಖೇರಿ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜೈಲಿನ ಮುಖ್ಯ ದ್ವಾರದ ಬದಲು ಪಕ್ಕದ ಮಾರ್ಗದಿಂದ ರಹಸ್ಯವಾಗಿ ಆಶಿಶ್ ಮಿಶ್ರಾ ಜೈಲಿನ ಹೊರಗೆ ಬಂದಿದ್ದು,  ಕಾರು ಹತ್ತಿ ತನ್ನ ನಿವಾಸಕ್ಕೆ ತಲುಪಿದ್ದಾನೆ. ಆತ ಆಗಮನದ ನಂತರ ಮನೆಯ ಗೇಟ್ ಬಂದ್ ಆಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆ ರದ್ದಿಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದವರ ಮೇಲೆ 2021ರ ಅಕ್ಟೋಬರ್ ನಲ್ಲಿ ಕಾರು ಹರಿಸಿ, ನಾಲ್ವರು ರೈತರು ಸೇರಿ ಒಟ್ಟು 8 ಮಂದಿಯನ್ನು ಹತ್ಯೆ ಮಾಡಿದ ಆರೋಪ ಆಶಿಶ್ ಮೇಲಿದೆ. ಪ್ರಕರಣ ಸಂಬಂಧ  ಲಖನೌ ಪೀಠದ ಅಲಹಾಬಾದ್ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಆದರೆ, ಸುಪ್ರೀಂ ನಿರ್ದೇಶನದ ಅನ್ವಯ ಮತ್ತೆ ವಿಚಾರಣೆ ನಡೆಸಿ, ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿದ ಆಶಿಶ್ ಮಿಶ್ರಾಗೆ ಸುಪ್ರೀಂಕೋರ್ಟ್ 4 ವಾರಗಳ ಷರತ್ತುಬದ್ಧ  ಜಾಮೀನು ಮಂಜೂರು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com