social_icon

ರೈಲು ಅಪಘಾತ ದೊಡ್ಡ ದುರಂತ: ರಕ್ಷಣೆಗೆ ರಾತ್ರೋರಾತ್ರಿ ಶ್ರಮಿಸಿದ ಸ್ಥಳೀಯರು, ರಕ್ಷಣಾ ಪಡೆಗಳಿಗೆ ಧನ್ಯವಾದ ಎಂದ ಒಡಿಶಾ ಸಿಎಂ

ರೈಲು ಅಪಘಾತ ದೊಡ್ಡ ದುರಂತವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ರಾತ್ರೋರಾತ್ರಿ ಶ್ರಮಿಸಿದ ಸ್ಥಳೀಯರು, ರಕ್ಷಣಾ ಪಡೆಗಳು ಹಾಗೂ ಇತರರಿಗೆ ಧನ್ಯವಾದಗಳನ್ನು ಹೇಳುತ್ತೇನೆಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶನಿವಾರ ಹೇಳಿದ್ದಾರೆ.

Published: 03rd June 2023 11:40 AM  |   Last Updated: 03rd June 2023 05:46 PM   |  A+A-


Odisha CM Naveen Patnaik

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್

Posted By : Manjula VN
Source : Online Desk

ಬಾಲಸೋರ್: ರೈಲು ಅಪಘಾತ ದೊಡ್ಡ ದುರಂತವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ರಾತ್ರೋರಾತ್ರಿ ಶ್ರಮಿಸಿದ ಸ್ಥಳೀಯರು, ರಕ್ಷಣಾ ಪಡೆಗಳು ಹಾಗೂ ಇತರರಿಗೆ ಧನ್ಯವಾದಗಳನ್ನು ಹೇಳುತ್ತೇನೆಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶನಿವಾರ ಹೇಳಿದ್ದಾರೆ.

ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ನವೀನ್ ಪಟ್ನಾಯಕ್ ಅವರು, ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲು ಅಪಘಾತ ದೊಡ್ಡ ದುರಂತ. ಸ್ಥಳದಲ್ಲಿ ಜನರ ರಕ್ಷಣೆಗೆ ರಾತ್ರೋರಾತ್ರಿ ಶ್ರಮಿಸಿದ ಸ್ಥಳೀಯ ತಂಡಗಳು, ಸ್ಥಳೀಯ ಜನರು, ಇತರರಿಗೆ ಧನ್ಯವಾದಗಳ ಹೇಳಲು ಬಯಸುತ್ತೇನೆ. ರೈಲ್ವೇ ಸುರಕ್ಷತೆಗೆ ಯಾವಾಗಲೂ ಆದ್ಯತೆ ನೀಡಬೇಕು. ಗಾಯಾಳುಗಳನ್ನು ಬಾಲಸೋರ್ ಮತ್ತು ಕಟಕ್‌ನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಡಿಶಾದಲ್ಲಿ ಭೀಕರ ರೈಲು ಅಪಘಾತ: ಭಾರತೀಯ ರೈಲ್ವೆ ಇತಿಹಾಸದಲ್ಲಿನ ಮಾರಣಾಂತಿಕ ಅಪಘಾತಗಳಲ್ಲೊಂದು..

ಈ ನಡುವೆ ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ಐಜಿ ನರೇಂದ್ರ ಸಿಂಗ್ ಬುಂದೇಲಾ ಅವರು, ಅಪಘಾತದಲ್ಲಿ 17 ಬೋಗಿಗಳು ಹಳಿ ತಪ್ಪಿದ್ದು, ಪೂರ್ಣ ಪ್ರಮಾಣದಲ್ಲಿ ನಾಶಗೊಂಡಿದೆ. ಎನ್ಆರ್'ಡಿಆರ್'ಎಫ್ ಪಡೆಯ 9 ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ದುರ್ಘಟನೆಗೆ ಕಾರಣಗಳು ತನಿಖೆ ನಂತರವೇ ತಿಳಿದು ಬರಲಿದೆ ಎಂದು ಹೇಳಿದ್ದಾರೆ.

ಸ್ಥಳದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ರಾಜ್ಯ ಸರ್ಕಾರವು 238 ಮಂದಿ ಸಾವನ್ನಪ್ಪಿದ್ದಾರೆ ಮತ್ತು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಘೋಷಿಸಿದೆ. ಸಂಜೆ ವೇಳೆ ಕಾರ್ಯಾಚರಣೆ ಪೂರ್ಣಗೊಳ್ಳುವ ವಿಶ್ವಾಸವಿದೆ. ಒಡಿಶಾದಿಂದ ಏಳು ಮತ್ತು ಪಶ್ಚಿಮ ಬಂಗಾಳದಿಂದ ಎರಡು ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.


Stay up to date on all the latest ದೇಶ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp