ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಏಕೆ ಮೌನವಾಗಿದ್ದಾರೆ: ಜೈರಾಮ್ ರಮೇಶ್ ಪ್ರಶ್ನೆ
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇನ್ನೂ ಏಕೆ ಮೌನವಾಗಿದ್ದಾರೆ. ಅವರು ಏಕೆ ರಾಜ್ಯಕ್ಕೆ ಭೇಟಿ ನೀಡುತ್ತಿಲ್ಲ ಮತ್ತು ಸೌಹಾರ್ಧತೆ ಕಾಪಾಡಿಕೊಳ್ಳಲು ಮನವಿ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಬುಧವಾರ ಪ್ರಶ್ನಿಸಿದೆ.
Published: 07th June 2023 04:13 PM | Last Updated: 07th June 2023 07:49 PM | A+A A-

ಜೈರಾಮ್ ರಮೇಶ್
ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇನ್ನೂ ಏಕೆ ಮೌನವಾಗಿದ್ದಾರೆ. ಅವರು ಏಕೆ ರಾಜ್ಯಕ್ಕೆ ಭೇಟಿ ನೀಡುತ್ತಿಲ್ಲ ಮತ್ತು ಸೌಹಾರ್ಧತೆ ಕಾಪಾಡಿಕೊಳ್ಳಲು ಮನವಿ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಬುಧವಾರ ಪ್ರಶ್ನಿಸಿದೆ.
ಮಣಿಪುರಕ್ಕೆ ಭೇಟಿ ನೀಡಲು ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಏಕೆ ಪ್ರೋತ್ಸಾಹಿಸುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
There appears to be no letting up in the enormous disaster that has engulfed Manipur for the past seven weeks. The Home Minister visited belatedly after a month and the nation must be thankful for small mercies.
But why is the Prime Minister still silent? Why doesnt he visit…— Jairam Ramesh (@Jairam_Ramesh) June 7, 2023
ಮಣಿಪುರವು ಕಳೆದ ಏಳು ವಾರಗಳಿಂದ ತೀವ್ರ ಮತ್ತು ಅಗಾಧ ವಿಪತ್ತನ್ನು ಅನುಭವಿಸುತ್ತಿದೆ. ಅಲ್ಲಿ ಯಾವುದೇ ಸುಧಾರಣೆಯ ಲಕ್ಷಣಗಳು ಕಾಣಿಸುತ್ತಿಲ್ಲ. ದುರಂತ ಸಂಭವಿಸಿದ ಒಂದು ತಿಂಗಳ ನಂತರ ಗೃಹ ಸಚಿವರ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ವಿಳಂಬದ ಹೊರತಾಗಿಯೂ, ಗೃಹ ಸಚಿವರ ಈ ಭೇಟಿಗೆ ಜನರು ಕೃತಜ್ಞರಾಗಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಆಂಬ್ಯುಲೆನ್ಸ್ಗೆ ಬೆಂಕಿ, 7 ವರ್ಷದ ಬಾಲಕ ಸೇರಿ ಮೂವರು ಸಜೀವ ದಹನ
'ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಇನ್ನೂ ಮೌನವಾಗಿರುವುದೇಕೆ? ಅವರು ಏಕೆ ರಾಜ್ಯಕ್ಕೆ ಭೇಟಿ ನೀಡಿಲ್ಲ ಮತ್ತು ಸಮುದಾಯಗಳ ನಡುವೆ ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಜನರಲ್ಲಿ ಏಕೆ ಮನವಿ ಮಾಡುತ್ತಿಲ್ಲ? ಮಣಿಪುರಕ್ಕೆ ಸರ್ವಪಕ್ಷ ನಿಯೋಗ ತೆರಳಲು ಅವರು ಏಕೆ ಪ್ರೋತ್ಸಾಹಿಸಬಾರದು?' ಎಂದೂ ಕೇಳಿದರು.