ಹನುಮಾನ್ ವಿಗ್ರಹ ಮುಂದೆ ಟು ಪೀಸ್ ನಲ್ಲಿ ಮಹಿಳಾ ಬಾಡಿ ಬಿಲ್ಡರ್ಗಳ ಪ್ರದರ್ಶನ; ವ್ಯಾಪಕ ಆಕ್ರೋಶ, ವಿಡಿಯೋ!
2023ರ ಮಹಿಳಾ ಬಾಡಿ ಬಿಲ್ಡರ್ ಇಂಡಿಯಾ ಚಾಂಪಿಯನ್ಶಿಪ್ ಮಧ್ಯಪ್ರದೇಶದ ರಾಟ್ಲ್ಯಾಮ್ನಲ್ಲಿ ನಡೆದಿದ್ದು ವೇದಿಕೆ ಮೇಲೆ ಹನುಮಾನ್ ಪ್ರತಿಮೆ ಮುಂದೆ ಮಹಿಳಾ ಬಾಡಿ ಬಿಲ್ಡರ್ಗಳು ಟು ಪೀಸ್ ನಲ್ಲಿ ಪ್ರದರ್ಶನ ನೀಡಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
Published: 07th March 2023 04:47 PM | Last Updated: 07th March 2023 07:16 PM | A+A A-

ಮಹಿಳಾ ಬಾಡಿ ಬಿಲ್ಡರ್ ಗಳ ಪ್ರದರ್ಶನ
ರಾಟ್ಲಾಮ್(ಮಧ್ಯಪ್ರದೇಶ): 2023ರ ಮಹಿಳಾ ಬಾಡಿ ಬಿಲ್ಡರ್ ಇಂಡಿಯಾ ಚಾಂಪಿಯನ್ಶಿಪ್ ಮಧ್ಯಪ್ರದೇಶದ ರಾಟ್ಲ್ಯಾಮ್ನಲ್ಲಿ ನಡೆದಿದ್ದು ವೇದಿಕೆ ಮೇಲೆ ಹನುಮಾನ್ ಪ್ರತಿಮೆ ಮುಂದೆ ಮಹಿಳಾ ಬಾಡಿ ಬಿಲ್ಡರ್ಗಳು ಟು ಪೀಸ್ ನಲ್ಲಿ ಪ್ರದರ್ಶನ ನೀಡಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಭಾನುವಾರ ಬೆಳಿಗ್ಗೆ ಈ ಸ್ಪರ್ಧೆಯು ಹನುಮಾನ್ ಜಿ ಅವರ ಪೂಜೆಯೊಂದಿಗೆ ಪ್ರಾರಂಭವಾಯಿತು. ಇದನ್ನು ಬಿಜೆಪಿಯ ಮೇಯರ್ ಸ್ವತಃ ಆಯೋಜಿಸಿದ್ದಾರೆ. ಪ್ರದರ್ಶನದ ವೇಳೆ ಹನುಮಾನ್ ವಿಗ್ರಹದ ಮುಂದೆ ಟು ಪೀಸ್ ಮತ್ತು ಶೂಟ್ ಗಳನ್ನು ಧರಿಸಿ ಪ್ರದರ್ಶನ ನೀಡಿರುವುದು ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಗಳು ರಾಜ್ಯದಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನೆ ನಡೆಸಿವೆ.
ಅದೇ ಸಮಯದಲ್ಲಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮಂಡಿ ಪ್ರದೇಶದಲ್ಲಿ ಒಟ್ಟುಗೂಡಿದ್ದು ಘಟನೆಯ ವಿರುದ್ಧ ಪ್ರತಿಭಟಿಸಿ ಹನುಮಾನ್ ಚಾಲಿಸಾ ಪಠಿಸಿದರು. ಕಾಂಗ್ರೆಸ್ ಹಿರಿಯ ನಾಯಕ ಪರಾಸ್ ಸಕ್ಲೆಚಾ, 'ಸ್ಪರ್ಧೆಯ ಹೆಸರಿನಲ್ಲಿ ನಡೆದಿರುವ ಅಶ್ಲೀಲತೆ ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಸ್ಪರ್ಧೆಯ ಬ್ಯಾನರ್ನಲ್ಲಿ, ಭಾರತೀಯ ಜನತಾ ಪಕ್ಷದ ನಾಯಕರೊಂದಿಗೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಫೋಟೋಗಳು ಇದ್ದವು.
बीजेपी नेताओं ने किया हनुमान जी का अपमान :
— MP Congress (@INCMP) March 6, 2023
रतलाम में भाजपा के बीजेपी विधायक चैतन्य कश्यप और महापौर प्रह्लाद पटेल ने हनुमान जी की मूर्ति स्टेज पर रखकर अश्लीश कार्यक्रम का आयोजन किया।
शिवराज जी,
भाजपा बार-बार हिन्दुओं का अपमान क्यों करती हैpic.twitter.com/C4FWb2i72N
ವಾಸ್ತವವಾಗಿ, ಸೋಷಿಯಲ್ ಮೀಡಿಯಾದಲ್ಲಿನ ಪೋಸ್ಟರ್ ಪ್ರಕಾರ, ಈ ಬಾಡಿ ಬಿಲ್ಡಿಂಗ್ ಸ್ಪರ್ಧೆಯನ್ನು ರಟ್ಲಾಮ್ ಸಿಟಿ ಶಾಸಕ ಚೇತನ್ ಕಶ್ಯಪ್, ಪ್ರಹ್ಲಾದ್ ಪಟೇಲ್ ಮತ್ತು ಸಂಘಟನಾ ಸಮಿತಿ ಸ್ಥಳೀಯ ಶಾಸಕ ಸಭಾಂಗಣದಲ್ಲಿ ಭಾರತೀಯ ಬಾಡಿ ಬಿಲ್ಡಿಂಗ್ ಫೆಡರೇಶನ್ ಬ್ಯಾನರ್ ಅಡಿಯಲ್ಲಿ ಆಯೋಜಿಸಿದೆ. 2023ರ ರಾಷ್ಟ್ರೀಯ ಚಾಂಪಿಯನ್ಶಿಪ್ ಅಡಿಯಲ್ಲಿ, ಇದು 13ನೇ ಕಿರಿಯ ಮಹಿಳಾ ಇಂಡಿಯಾ ಸ್ಪರ್ಧೆಯಾಗಿದ್ದು, ಭಾನುವಾರ ಕೊನೆಗೊಂಡಿತು. ಈ ಸಮಯದಲ್ಲಿ, ಎಲ್ಲಾ ಬಾಡಿಬಿಲ್ಡರ್ಗಳು ತಮ್ಮ ಸ್ನಾಯುಗಳನ್ನು ಪ್ರದರ್ಶಿಸಿದರು.