social_icon

ಭಾರತವನ್ನು ಮುನ್ನಡೆಸುವಲ್ಲಿ 'ನಾರಿ ಶಕ್ತಿ' ಯ ಪಾತ್ರ ಮಹತ್ತರವಾಗಿದೆ: ಮನ್ ಕಿ ಬಾತ್ ನ 99ನೇ ಆವೃತ್ತಿಯಲ್ಲಿ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ 99ನೇ ಆವೃತ್ತಿಯ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಮಾಸಿಕ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿರುವ ಅವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಯಶಸ್ಸು, ಮಹಿಳಾ ಸಬಲೀಕರಣ, ಅಂಗದಾನ ಜಾಗೃತಿ, ಕೋವಿಡ್ -19 ಸಾಂಕ್ರಾಮಿಕ ಮತ್ತು ಇತರ ಹಲವು ಪ್ರಮುಖ

Published: 26th March 2023 12:55 PM  |   Last Updated: 26th March 2023 01:31 PM   |  A+A-


PM Narendra Modi

ಪಿಎಂ ನರೇಂದ್ರ ಮೋದಿ

Posted By : Sumana Upadhyaya
Source : The New Indian Express

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ 99ನೇ ಆವೃತ್ತಿಯ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಮಾಸಿಕ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿರುವ ಅವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಯಶಸ್ಸು, ಮಹಿಳಾ ಸಬಲೀಕರಣ, ಅಂಗದಾನ ಜಾಗೃತಿ, ಕೋವಿಡ್ -19 ಸಾಂಕ್ರಾಮಿಕ ಮತ್ತು ಇತರ ಹಲವು ಪ್ರಮುಖ ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ. 

ಮನ್ ಕಿ ಬಾತ್ ಕಾರ್ಯಕ್ರಮ ಮೊದಲ ಶೋ 3ನೇ ಅಕ್ಟೋಬರ್ 2014 ರಂದು ಪ್ರಸಾರವಾಗಿ ಇಂದು 99ನೇ ಸಂಚಿಕೆ ಕಂಡಿದೆ. ಮುಂದಿನ ತಿಂಗಳು ಏಪ್ರಿಲ್ 30 ರಂದು ನಡೆಯುವ ಮನ್ ಕಿ ಬಾತ್ ನ 100 ನೇ ಸಂಚಿಕೆಗಾಗಿ ಭಾರತೀಯ ಜನತಾ ಪಾರ್ಟಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 

ಪ್ರಧಾನಿಯವರ ಇಂದಿನ ಭಾಷಣದ ಮುಖ್ಯಾಂಶಗಳು: 
1) ಅಂಗಾಂಗ ದಾನ: ಅಂಗಾಂಗ ದಾನವು ಯಾರಿಗಾದರೂ ಜೀವ ನೀಡುವ ಅತ್ಯಂತ ಪ್ರಮುಖ ಸಾಧನವಾಗಿದೆ. ವ್ಯಕ್ತಿಯು ಮರಣದ ನಂತರ ಒಬ್ಬರ ದೇಹವನ್ನು ದಾನ ಮಾಡಿದಾಗ, ಅದು ಎಂಟರಿಂದ ಒಂಬತ್ತು ಜನರಿಗೆ ಹೊಸ ಜೀವನವನ್ನು ಪಡೆಯುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ. ಇಂದು ದೇಶದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಂತಸದ ಸಂಗತಿ, 2013ರಲ್ಲಿ ನಮ್ಮ ದೇಶದಲ್ಲಿ ಅಂಗಾಂಗ ದಾನದ ಸಂಖ್ಯೆ ಐದು ಸಾವಿರಕ್ಕಿಂತ ಕಡಿಮೆಯಿತ್ತು. 2022ರಲ್ಲಿ ಈ ಸಂಖ್ಯೆ ಹದಿನೈದು ಸಾವಿರಕ್ಕೂ ಹೆಚ್ಚಾಗಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ಹೇಳಿದ್ದಾರೆ. 

2) ನವೀಕರಿಸಬಹುದಾದ ಇಂಧನ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಅದ್ಭುತ ಯಶಸ್ಸಿನ ಬಗ್ಗೆ ಪ್ರಪಂಚದಾದ್ಯಂತ ಜನರು ಮಾತನಾಡುತ್ತಾರೆ ಎಂದು ಪ್ರಧಾನಿ ಹೇಳಿದರು. ಸೂರ್ಯನ ಶಕ್ತಿಯ ಬಗ್ಗೆ ನಮಗಿರುವ ವೈಜ್ಞಾನಿಕ ತಿಳುವಳಿಕೆ, ಸೂರ್ಯನನ್ನು ಆರಾಧಿಸುವ ಸಂಪ್ರದಾಯಗಳು ಇತರ ಸ್ಥಳಗಳಲ್ಲಿ ಅಪರೂಪವಾಗಿ ಕಂಡುಬರುತ್ತವೆ. 'ಸಬ್ಕಾ ಪ್ರಯಾಸ್'ನ ಈ ಮನೋಭಾವವು ಇಂದು ಭಾರತದ ಸೌರ ಮಿಷನ್ ನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಮನೆಯಲ್ಲಿ ದಿನದ ಅಗತ್ಯಗಳಿಗಾಗಿ ನವೀಕರಣ ಇಂಧನವನ್ನು ಶೇಕಡಾ 100ರಷ್ಟು ಶುದ್ಧ ಇಂಧನವನ್ನು ಬಳಸುವ ಜಿಲ್ಲೆ ದಿಯು ಆಗಿದೆ. 

3) ಕಾಶಿ-ತಮಿಳು ಸಂಗಮಮ್: 'ಸೌರಾಷ್ಟ್ರ-ತಮಿಳು ಸಂಗಮಂ' ಏಪ್ರಿಲ್ 17 ರಿಂದ 30 ರವರೆಗೆ ನಡೆಯಲಿದೆ ಎಂದು ಪ್ರಧಾನಿ ಹೇಳಿದರು. ಕೆಲವು ತಿಂಗಳ ಹಿಂದೆ ಕಾಶಿಯಲ್ಲಿ ಅಂತಹ ಒಂದು ಸಂಪ್ರದಾಯ ಪ್ರಾರಂಭವಾಯಿತು. ಕಾಶಿ-ತಮಿಳು ಸಂಗಮಂ ಸಮಯದಲ್ಲಿ, ಕಾಶಿ ಮತ್ತು ತಮಿಳು ಪ್ರದೇಶದ ನಡುವಿನ ಶತಮಾನಗಳ-ಹಳೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಆಚರಿಸಲಾಯಿತು. ನಾವು ಒಬ್ಬರನ್ನೊಬ್ಬರು ತಿಳಿದಾಗ ಮತ್ತು ಕಲಿಯುವಾಗ, ಈ ಏಕತೆಯ ಭಾವನೆ ಬಲಗೊಳ್ಳುತ್ತದೆ. ಈ ಏಕತೆಯ ಮನೋಭಾವದಿಂದ ಮುಂದಿನ ತಿಂಗಳು ಗುಜರಾತ್‌ನ ವಿವಿಧ ಭಾಗಗಳಲ್ಲಿ 'ಸೌರಾಷ್ಟ್ರ-ತಮಿಳು ಸಂಗಮಂ' ನಡೆಯಲಿದೆ.

4) ಜಮ್ಮು ಮತ್ತು ಕಾಶ್ಮೀರ: ಕೃಷಿಗೆ ಸಂಬಂಧಿಸಿದ ಕಾಶ್ಮೀರದ ಜನರು ಇತ್ತೀಚಿನ ದಿನಗಳಲ್ಲಿ ಅದರ ಯಶಸ್ಸಿನ ಪರಿಮಳವನ್ನು ಹರಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. "ರೈತರು ದಶಕಗಳಿಂದ ಸಾಂಪ್ರದಾಯಿಕ ಜೋಳದ ಕೃಷಿಯಲ್ಲಿ ತೊಡಗಿದ್ದರು, ಆದರೆ ಕೆಲವು ರೈತರು ವಿಭಿನ್ನವಾಗಿ ಮಾಡಲು ಯೋಚಿಸಿದರು. ಕೆಲವರು ಹೂವುಗಳ ಕೃಷಿಗೆ ತಿರುಗಿದರು. ಇಂದು ಇಲ್ಲಿ ಸುಮಾರು ಎರಡೂವರೆ ಸಾವಿರ ರೈತರು ಲ್ಯಾವೆಂಡರ್ ಕೃಷಿ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಅರೋಮಾ ಮಿಷನ್ ಮೂಲಕವೂ ಅವುಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹೊಸ ಕೃಷಿಯು ರೈತರ ಆದಾಯವನ್ನು ಹೆಚ್ಚು ಹೆಚ್ಚಿಸಿದೆ.

5) ಮಹಿಳಾ ಸಬಲೀಕರಣ: ದೇಶದ ಹೆಣ್ಣು ಮಕ್ಕಳು ಮೂರು ಸಶಸ್ತ್ರ ಪಡೆಗಳಲ್ಲಿ ತಮ್ಮ ಶೌರ್ಯದ ಪತಾಕೆಯನ್ನು ಹಾರಿಸುತ್ತಿದ್ದಾರೆ ಎಂದರು. ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಯುದ್ಧ ಘಟಕದಲ್ಲಿ ಕಮಾಂಡ್ ನೇಮಕಾತಿಯನ್ನು ಪಡೆದ ಮೊದಲ ಮಹಿಳಾ ವಾಯುಪಡೆ ಅಧಿಕಾರಿಯಾಗಿದ್ದಾರೆ. ಆಕೆಗೆ ಸುಮಾರು 3,000 ಗಂಟೆಗಳ ಹಾರಾಟದ ಅನುಭವವಿದೆ.

ಅದೇ ರೀತಿ ಭಾರತೀಯ ಸೇನೆಯ ಕೆಚ್ಚೆದೆಯ ಕ್ಯಾಪ್ಟನ್ ಶಿವ ಚೌಹಾಣ್ ಅವರು ಸಿಯಾಚಿನ್‌ನಲ್ಲಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ತಾಪಮಾನವು ಮೈನಸ್ ಅರವತ್ತು (-60) ಡಿಗ್ರಿಗಳಿಗೆ ಇಳಿಯುವ ಸಿಯಾಚಿನ್‌ನಲ್ಲಿ ಶಿವ ಮೂರು ತಿಂಗಳ ಚೌಹಾಣ್ ಮೂರು ತಿಂಗಳ ಕಾಲ ನೆಲೆಸಿದ್ದರು. 


Stay up to date on all the latest ದೇಶ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp