ಎನ್‌ಸಿಪಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರದ ಬಗ್ಗೆ ಯೋಚಿಸಲು ಶರದ್ ಪವಾರ್ ಗೆ 2-3 ದಿನ ಬೇಕು: ಅಜಿತ್

ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಘೋಷಣೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಶರದ್ ಪವಾರ್ ಅವರು ಇಂದು ತಮ್ಮ ನಿರ್ಧಾರವನ್ನು 'ಆಲೋಚಿಸಲು' ಎರಡರಿಂದ ಮೂರು ದಿನಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅಜಿತ್ ಪವಾರ್
ಅಜಿತ್ ಪವಾರ್

ಮುಂಬೈ: ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಘೋಷಣೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಶರದ್ ಪವಾರ್ ಅವರು ಇಂದು ತಮ್ಮ ನಿರ್ಧಾರವನ್ನು 'ಆಲೋಚಿಸಲು' ಎರಡರಿಂದ ಮೂರು ದಿನಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರತಿಭಟನಾನಿರತ ಪಕ್ಷದ ಕಾರ್ಯಕರ್ತರಿಗೆ ತಮ್ಮ ಸಂದೇಶವನ್ನು ರವಾನಿಸಿದ ಅವರ ಸೋದರಳಿಯ ಅಜಿತ್ ಪವಾರ್ ಅವರು ಪಕ್ಷದ ವರಿಷ್ಠ ಪವಾರ್ ಅನಿರೀಕ್ಷಿತ ನಿರ್ಧಾರವನ್ನು ವಿರೋಧಿಸಿ ಎನ್‌ಸಿಪಿ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡದಂತೆ ವಿನಂತಿಸಿದ್ದಾರೆ.

ಶರದ್ ಪವಾರ್ ತಮ್ಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಿಮ್ಮ ಒತ್ತಾಯದ ಕಾರಣದಿಂದಾಗಿ ಅದನ್ನು ಯೋಚಿಸಲು ಎರಡು-ಮೂರು ದಿನಗಳು ಬೇಕಾಗುತ್ತದೆ. ಆದರೆ ಎಲ್ಲಾ ಕಾರ್ಯಕರ್ತರು ಪ್ರತಿಭಟನೆ ಬಿಟ್ಟು ಮನೆಗೆ ಹೋದರೆ ಮಾತ್ರ ಅವರು ಯೋಚಿಸುತ್ತಾರೆ ಎಂದು ಅಜಿತ್ ಇಲ್ಲಿನ ಯಶವಂತರಾವ್ ಚವಾಣ್ ಪ್ರತಿಷ್ಠಾನದ ಆವರಣದಲ್ಲಿ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಹಲವಾರು ಕಾರ್ಯಕರ್ತರು ಸ್ಥಳದಿಂದ ಹೊರಹೋಗಲು ನಿರಾಕರಿಸಿದರು. ಅಲ್ಲಿ ಪವಾರ್ ಹಿಂದಿನ ದಿನ ಅವರ ಪರಿಷ್ಕೃತ ಆತ್ಮಚರಿತ್ರೆಯ ಬಿಡುಗಡೆಯ ಸಂದರ್ಭದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com