ಜಿ20 ಶೃಂಗಸಭೆ ಮುಗಿದಿದೆ; ಈಗ ಮೋದಿ ಸರ್ಕಾರ ಸ್ಥಳೀಯ ವಿಷಯಗಳ ಕಡೆ ಗಮನ ಹರಿಸಲಿ- ಮಲ್ಲಿಕಾರ್ಜುನ್ ಖರ್ಗೆ
ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರ ಆರೋಪದ ವಿಷಯಗಳ ಕುರಿತಂತೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಿ20 ಶೃಂಗಸಭೆಯ ಮುಗಿದಿದೆ. ಈಗ ಮೋದಿ ಸರ್ಕಾರ ಈಗ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
Published: 11th September 2023 06:27 PM | Last Updated: 12th September 2023 05:19 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರ ಆರೋಪದ ವಿಷಯಗಳ ಕುರಿತಂತೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಿ20 ಶೃಂಗಸಭೆಯ ಮುಗಿದಿದೆ. ಈಗ ಮೋದಿ ಸರ್ಕಾರ ಈಗ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಈಗ ಜಿ20 ಸಭೆ ಮುಗಿದಿದ್ದು, ಮೋದಿ ಸರ್ಕಾರ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಖರ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಗಸ್ಟ್ನಲ್ಲಿ ತಾಲಿ ಊಟದ ಬೆಲೆಯಲ್ಲಿ ಶೇಕಡ 24ರಷ್ಟು ಹೆಚ್ಚಾಗಿದೆ. ದೇಶದಲ್ಲಿ ನಿರುದ್ಯೋಗ ದರ ಶೇ.8ರಷ್ಟಿದೆ. ಯುವಕರ ಭವಿಷ್ಯ ಮಂಕಾಗಿದೆ. ಮೋದಿ ಸರಕಾರದ ದುರಾಡಳಿತದಿಂದ ಭ್ರಷ್ಟಾಚಾರದ ಮಹಾಪೂರವೇ ಹರಿದು ಬಂದಿದೆ ಎಂದು ಖರ್ಗೆ ಆರೋಪಿಸಿದರು.
ಸಿಎಜಿ ಹಲವು ವರದಿಗಳಲ್ಲಿ ಬಿಜೆಪಿಯನ್ನು ಬಯಲಿಗೆಳೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 13,000 ಕೋಟಿ ರೂಪಾಯಿ ಜಲ ಜೀವನ್ ಹಗರಣ ಬೆಳಕಿಗೆ ಬಂದಿದೆ. ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ದಲಿತ ಐಎಎಸ್ ಅಧಿಕಾರಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಭಾರತ-ಸೌದಿ ನಡುವೆ 24 ಒಪ್ಪಂದಗಳಿಗೆ ಸಹಿ!
ಪ್ರಧಾನಿಯವರ ಆತ್ಮೀಯ ಗೆಳೆಯನ ಲೂಟಿ ಇತ್ತೀಚೆಗೆ ಮತ್ತೆ ಬೆಳಕಿಗೆ ಬಂದಿದೆ ಎಂದು ಕಿಡಿಕಾರಿದರು. 2019ರ ಚುನಾವಣೆಗೆ ಮುನ್ನ ಆರ್ಬಿಐ ಖಜಾನೆಯಿಂದ ಮೋದಿ ಸರ್ಕಾರಕ್ಕೆ 3 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಲು ಸರ್ಕಾರದ ಒತ್ತಡವನ್ನು ರಿಸರ್ವ್ ಬ್ಯಾಂಕ್ ಮಾಜಿ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ವಿರೋಧಿಸಿದ್ದರು. ಈ ವಿಚಾರ ಇದೀಗ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಲ್ಲಿ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ, ಹಿಮಾಚಲ ಪ್ರದೇಶದಲ್ಲಿ ಅನಾಹುತವಾಗಿದೆ, ಆದರೆ ದುರಹಂಕಾರಿ ಮೋದಿ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವುದನ್ನು ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.
ಇದೆಲ್ಲದರ ನಡುವೆ ಮೋದಿಯವರು ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಾರ್ವಜನಿಕರು ಮೋದಿ ಸರ್ಕಾರದ ವಿಚಲಿತ ಸಮಸ್ಯೆಗಳ ಬದಲಿಗೆ ಸತ್ಯವನ್ನು ಕೇಳಲು ಮತ್ತು ನೋಡಲು ಬಯಸುತ್ತಾರೆ. 2024ರಲ್ಲಿ ನಿಮ್ಮ ನಿರ್ಗಮನಕ್ಕೆ ಸಾರ್ವಜನಿಕರು ದಾರಿ ಮಾಡಿಕೊಡುತ್ತಿದ್ದಾರೆ ಎನ್ನುವುದನ್ನು ಮೋದಿ ಸರಕಾರ ಎಚ್ಚರಿಕೆಯಿಂದ ಆಲಿಸಬೇಕು ಎಂದು ಖರ್ಗೆ ಹೇಳಿದರು.