ವ್ಯಾಪಾರದಲ್ಲಿ ಪಾಶ್ಚಿಮಾತ್ಯ ದೇಶಗಳನ್ನು ನಕಾರಾತ್ಮಕವಾಗಿ ನೋಡುವ ದೃಷ್ಟಿಕೋನ ಬದಲಾಗಬೇಕು: ವಿದೇಶಾಂಗ ಸಚಿವ ಎಸ್ ಜೈಶಂಕರ್
ಜಾಗತಿಕ ವಾಣಿಜ್ಯ ಮತ್ತು ವ್ಯಾಪಾರ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಕೆಟ್ಟವು ಎಂಬ ದೃಷ್ಟಿಕೋನವಿದ್ದು, ಇದು ಬದಲಾಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
Published: 18th September 2023 03:08 PM | Last Updated: 18th September 2023 03:08 PM | A+A A-

ಎಸ್ ಜೈಶಂಕರ್
ನವದೆಹಲಿ: ಜಾಗತಿಕ ವಾಣಿಜ್ಯ ಮತ್ತು ವ್ಯಾಪಾರ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಕೆಟ್ಟವು ಎಂಬ ದೃಷ್ಟಿಕೋನವಿದ್ದು, ಇದು ಬದಲಾಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡುವ ಸಲುವಾಗಿ ಕೇರಳದ ತಿರುವನಂತಪುರಂನಲ್ಲಿರುವ ಎಸ್ ಜೈ ಶಂಕರ್, ಮಲಯಾಳಂ ಸುದ್ದಿವಾಹಿನಿ ಏಷ್ಯಾನೆಟ್ಗೆ ನೀಡಿದ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದರು.
'ಏಷ್ಯನ್ ಮತ್ತು ಆಫ್ರಿಕನ್ ಮಾರುಕಟ್ಟೆಗಳನ್ನು ಬೃಹತ್ ಪ್ರಮಾಣದಲ್ಲಿ ಸರಕುಗಳಿಂದ ತುಂಬಿಸದ ಕಾರಣ ಪಶ್ಚಿಮವು "ಕೆಟ್ಟ ವ್ಯಕ್ತಿ" ಅಲ್ಲ ಮತ್ತು ಅದನ್ನು ನೋಡುವ ನಕಾರಾತ್ಮಕ ಮಾರ್ಗ "ಸಿಂಡ್ರೋಮ್" ನಿಂದ ಹೊರಬರುವ ಅವಶ್ಯಕತೆಯಿದೆ. ಪಾಶ್ಚಿಮಾತ್ಯ ದೇಶಗಳಿಂದ ಏಷ್ಯಾ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸರಕುಗಳು ಬರುತ್ತಿಲ್ಲ. ಆದ್ದರಿಂದ ಈ ಭಾಗದ ದೇಶಗಳನ್ನು ನಕಾರಾತ್ಮಕವಾಗಿ ನೋಡುವ ಧೋರಣೆ ಬದಲಾಗುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
At the PM Vishwakarma function in Thiruvananthapuram today. https://t.co/Z0XUDIZ17R pic.twitter.com/u72uHgL641
— Dr. S. Jaishankar (@DrSJaishankar) September 17, 2023
ನಾನು ಪಾಶ್ಚಿಮಾತ್ಯ ದೇಶಗಳ ಪರವಾಗಿ ನಾನು ಮಾತನಾಡುತ್ತಿಲ್ಲ. ಆದರೆ ಜಾಗತೀಕರಣದಿಂದ ರಿಯಾಯಿತಿ, ಸಬ್ಸಿಡಿಗಳಿಂದಾಗಿ ಉತ್ಪಾದನೆಯು ಒಂದೇ ಕಡೆ ಕೇಂದ್ರಿತವಾಗಿದೆ. ಇದರಿಂದ ಹಲವು ದೇಶಗಳ ಆರ್ಥಿಕತೆಗೆ ತೊಂದರೆಯಾಗುತ್ತಿದೆ. ಪಶ್ಚಿಮದವರು ಕೆಟ್ಟವರು, ಅಭಿವೃದ್ಧಿಶೀಲ ದೇಶಗಳು ಒಳ್ಳೆಯವು ಎಂಬ ಪರಿಕಲ್ಪನೆಯನ್ನು ಕಳಚುವ ಅವಶ್ಯಕತೆ ಇದೆ ಎಂಬುದು ನನ್ನ ಭಾವನೆ ಎಂದು ಜೈಶಂಕರ್ ಹೇಳಿದ್ದಾರೆ.
ಇದನ್ನೂ ಓದಿ: ಸಂಸತ್ ಪ್ರವೇಶಿಸುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ, ಹಳೆ ಸಂಸತ್ ಭವನ ನಮಗೆಂದಿಗೂ ಪ್ರೇರಣೆ: ಪ್ರಧಾನಿ ಮೋದಿ
ಅಂತೆಯೇ ಕಳೆದ 15 ರಿಂದ 20 ವರ್ಷಗಳಲ್ಲಿ, ಜಾಗತೀಕರಣದ ಅಸಮಾನತೆಗಳ ಬಗ್ಗೆ ಬಲವಾದ ಅರ್ಥವನ್ನು ನಿರ್ಮಿಸುವುದು ಇಂದಿನ ಸಮಸ್ಯೆಯಾಗಿದೆ. ಅಲ್ಲಿ ದೇಶಗಳು ತಮ್ಮ ಉತ್ಪನ್ನಗಳು, ಉತ್ಪಾದನೆ ಮತ್ತು ಉದ್ಯೋಗಗಳು ತಮ್ಮ ಮಾರುಕಟ್ಟೆಗಳು ಅಗ್ಗದ ಸರಕುಗಳಿಂದ ಪ್ರವಾಹಕ್ಕೆ ಒಳಗಾಗುವುದರಿಂದ ಒತ್ತಡಕ್ಕೆ ಒಳಗಾಗಿವೆ ಎಂದು ಜೈಶಂಕರ್ ಚೀನಾದ ವ್ಯಾಪಾರ ಮತ್ತು ಆರ್ಥಿಕ ನೀತಿಗಳ ಪರೋಕ್ಷವಾಗಿ ಉಲ್ಲೇಖಿಸಿದರು.
ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗೈರಾಗಿರುವುದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ಮಾರುಕಟ್ಟೆಗೆ ಬಹಳ ಅಗ್ಗದ ಸರಕುಗಳು ಬಂದು ಬೀಳುತ್ತಿರುವುದು ಕೆಲ ದೇಶಗಳಿಗೆ ಕಿರಿಕಿರಿಯಾಗುತ್ತಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.