ಕನ್ನಡ ಚಿತ್ರರಂಗದ ದಂತಕಥೆ ಮತ್ತು ಮಾಜಿ ಕೇಂದ್ರ ಸಚಿವ ಮಳವಳ್ಳಿ ಹುಚ್ಚೇ ಗೌಡ ಅಮರನಾಥ್ ಚಿತ್ರರಂಗದಲ್ಲಿ ಅಂಬರೀಷ್ ಆಗಿ ಪ್ರಖ್ಯಾತರಾದರು. ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹಠಾತ್ತನೆ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.
ರಾಜ್ ಕುಮಾರ್ ತಲೆಮಾರಿನ ಕೊನೆಯ ಕೊಂಡಿ ಕಳಚಿಬಿದ್ದಿದೆ. ಅನೇಕ ಸಮಯಗಳಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಿಡ್ನಿ ಸಮಸ್ಯೆಗೆ ಸಹ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಅಂಬರೀಷ್ ಹುಟ್ಟಿದ್ದು 1952ರ ಮೇ 29ರಂದು. ರೆಬೆಲ್ ಸ್ಟಾರ್ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುವ ಅಂಬರೀಷ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 4 ದಶಕಗಳ ಕಾಲ ಚಿತ್ರರಂಗದಲ್ಲಿ ಬೆಳೆದ ಅಂಬರೀಷ್ ದಕ್ಷಿಣ ಭಾರತದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.
ಹಿಂದಿನ ಯುಪಿಎ ಸರ್ಕಾರದಲ್ಲಿ ಮೇ 2013ರಲ್ಲಿ ಕೇಂದ್ರ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದರು. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ವಸತಿ ಸಚಿವರು ಕೂಡ ಆಗಿದ್ದರು. ಆದರೆ ಸಚಿವ ಸಂಪುಟದ ಬೃಹತ್ ಪುನರ್ ವಿಂಗಡಣೆ ಸಂದರ್ಭದಲ್ಲಿ ಅಂಬರೀಷ್ ಅವರ ಜೊತೆ 13 ಸಚಿವರನ್ನು ಹುದ್ದೆಯಿಂದ ವಜಾಗೊಳಿಸಿದ್ದರು.
ಮಂಡ್ಯದ ಎಂ ವಿ ಸ್ಟೇಡಿಯಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಸುಮಲತಾ ಅಂಬರೀಷ್ ಜೊತೆಗೆ ಅಂಬರೀಷ್.
ತಮಿಳು ಮತ್ತು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಮತ್ತು ಚಿರಂಜೀವಿ ಜೊತೆ ಅಂಬರೀಷ್ ದಂಪತಿ.
ರಾಜ್ ಕುಮಾರ್ ಸಮಾಧಿ ಸ್ಥಳದಲ್ಲಿ ಅಂಬರೀಷ್, ಚಿರಂಜೀವಿ, ರಜನಿಕಾಂತ್ ತೆಗೆದುಕೊಂಡ ಫೋಟೋ.