ತಕ್ಷಣವೇ ರಾಜಕಾಲುವೆ ಅಗಲೀಕರಣ ಮಾಡಲು ಸೂಚಿಸಿದ್ದೇನೆ. ಈ ಸಂಬಂಧ ಬಿಬಿಎಂಪಿ ಮತ್ತು ಎಂಜಿನಿಯರ್ ಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ
ಜಲಾವೃತ್ತವಾಗಿರುವ ಅಪಾರ್ಟ್ ಮೆಂಟ್ ನಲ್ಲಿ 603 ಅಪಾರ್ಟ್ ಮೆಂಟ್ ಗಳಿದ್ದು, ಇಲ್ಲಿ ನೀರಿನ ಹರಿವಿನ ಸಮಸ್ಯೆ ಕುರಿತು ನಿವಾಸಿಗಳೊಂದಿಗೆ ಸಿಎಂ ಮಾತನಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ದಾಟಿ ನೀರು ಮುಂದೆ ಹೋಗಬೇಕು. ಹೀಗಾಗಿ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ. ಶೀಘ್ರದಲ್ಲೇ ಹೆದ್ದಾರಿ ಮಾರ್ಗವಾಗಿ ಒಳಚರಂಡಿ ಪೈಪ್ ಲೈನ್ ಅಳಡಿಸಿ ನೀರು ಶೇಖರಣವಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಹೊರ ಹರಿವು ಕೂಡ ದೊಡ್ಡ ಪ್ರಮಾಣದಲ್ಲಿದ್ದು, ಹೀಗಾಗಿ ರಾಜಕಾಲುವ ಸಾಮರ್ಥ್ಯ ಸಾಲುತ್ತಿಲ್ಲ. ಅಲ್ಲದೆ ರಾಜಕಾಲುವೆ ಅತಿಕ್ರಮಣ ಆಗಿರುವುದೂ ಕೂಡ ಜನನಿವಾಸ ಪ್ರದೇಶಗಳು ಜಲಾವೃತವಾಗಲು ಕಾರಣವಾಗುತ್ತಿದೆ.
ಸಿಎಂ ಭೇಟಿ ವೇಳೆ ಜಲಾವೃತಗೊಂಡಿರುವ ಅಪಾರ್ಟ್ ಮೆಂಟ್ ನ ಮಂದಿ ಕಂಡುಬಂದಿದ್ದು ಹೀಗೆ...
ಸಿಎನ್ ಆರ್ ರಾವ್ ಜೊತೆ ಸಿಎಂ ಮಾತು
JNCASR ಸಂಸ್ಥೆಯ ಮುಖ್ಯಸ್ಥ ಭಾರತರತ್ನ ಸಿ.ಎನ್.ಆರ್.ರಾವ್-ಸಿಎಂ ಭೇಟಿ
ಕೆರೆ ಕೋಡಿ ಹೊಡೆದು ಆ ನೀರು ಅಪಾರ್ಟ್ಮೆಂಟ್ಗೆ ನುಗ್ಗಿದೆ. ಯಲಹಂಕ ಶಾಸಕರು ಸ್ಥಳಕ್ಕೆ ಆಗಮಿಸಿ ಜನರಿಗೆ ಸಂಪೂರ್ಣ ಸಹಾಯ ಮಾಡಿದ್ದಾರೆ. ಇದಕ್ಕೆ ಪರಿಹಾರ ಕೊಡುವ ಬಗ್ಗೆ ಚರ್ಚೆ ಮಾಡಿದ್ದೇನೆ-ಸಿಎಂ ಬೊಮ್ಮಾಯಿ
ಬಳಿಕ ಕಳೆದ ಕೆಲವು ದಿನಗಳ ಭಾರಿ ಮಳೆಗೆ ಜಲಾವೃತವಾಗಿದ್ದ ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಗೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ
JNCASR ಸಂಸ್ಥೆಯ ಮುಖ್ಯಸ್ಥ ಭಾರತರತ್ನ ಸಿ.ಎನ್.ಆರ್.ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಈಗ 8 ಅಡಿ ಇರುವ ರಾಜಕಾಲುವೆಯನ್ನು ಇನ್ನೂ ಹೆಚ್ಚಿಸಿ 30 ಅಡಿಗೇರಿಸಬೇಕು. ಎರಡೂ ರಾಜಕಾಲುವೆ ಯಾವುದೇ ರೀತಿಯ ಅಡಚಣೆ ಇಲ್ಲದೇ ನೀರು ಹರಿವಿನ ವ್ಯವಸ್ಥೆ ಮಾಡಬೇಕಿದೆ.