ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಕೃಷ್ಣನ್ ದಂಪತಿ ಪ್ರತಿವರ್ಷ ನವರಾತ್ರಿಗೆ ದಸರಾ ಬೊಂಬೆಯನ್ನು ಕೂರಿಸುತ್ತಾರೆ. ಕಳೆದ 25 ವರ್ಷಗಳಿಂದ ಈ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಕೃಷ್ಣನ್ ದಂಪತಿ ಪ್ರತಿವರ್ಷ ನವರಾತ್ರಿಗೆ ದಸರಾ ಬೊಂಬೆಯನ್ನು ಕೂರಿಸುತ್ತಾರೆ. ಕಳೆದ 25 ವರ್ಷಗಳಿಂದ ಈ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದಾರೆ.
ಕೃಷ್ಣನ್ ಅವರ ಮನೆಯ ಮೈಸೂರು ಅರಮನೆ ಮತ್ತು ನಾಡಹಬ್ಬ ದಸರಾದ ವೈಭವ
ಮನೆಯಲ್ಲಿ ದುರ್ಗಾಮಾತೆಯ ವಿವಿಧ ರೂಪಗಳ ಮೂರ್ತಿಯ ಸೊಬಗು.
ಶ್ರೀರಾಮ-ಲಕ್ಷ್ಮಣ, ಸೀತೆ-ಹನುಮಂತ ರಾಮಾಯಣ ಕಥೆಯ ಬೊಂಬೆಗಳು.
ಪುರಾಣ ಕಥೆ, ಇತಿಹಾಸ, ಯುಗಪುರುಷರ ಬಗ್ಗೆ ಪರಿಚಯ ಮಾಡಲು ದಸರಾ ಬೊಂಬೆ ಇಡುವುದು ಕೂಡ ಒಂದು ಮಾರ್ಗ ಎನ್ನುತ್ತಾರೆ ಕೃಷ್ಣನ್
ಮಕ್ಕಳಿಗೆ ಈ ರೀತಿ ನಮ್ಮ ಸಂಸ್ಕೃತಿ, ಕಲೆ, ಪುರಾಣ ಕಥೆಗಳನ್ನು ಹೇಳಲು ಈ ರೀತಿ ದಸರಾ ಬೊಂಬೆಗಳನ್ನಿಟ್ಟರೆ ಖುಷಿಯಾಗುತ್ತದೆ ಎಂದು ಇಡುತ್ತೇವೆ. ಇದನ್ನು ನೋಡಿದಾಗ ಇಂದಿನ ಮಕ್ಕಳಿಗೆ ನಮ್ಮ ಪುರಾಣ, ಇತಿಹಾಸಗಳ ಬಗ್ಗೆ ಗೊತ್ತಾಗುತ್ತದೆ ಎನ್ನುತ್ತಾರೆ ಕೃಷ್ಣನ್
ಶಿವ-ಪಾರ್ವತಿಯರ ವಿವಿಧ ಕಥೆ ಸಾರುವ ಬೊಂಬೆಗಳು
ವಿವಿಧ ಋಷಿ-ಮುನಿಗಳು, ಮಹಾಪುರುಷರು, ಯುಗಪುರುಷರ ಸುಂದರ ಬೊಂಬೆಗಳು
ದೇವಿಯ ವಿವಿಧ ರೂಪಗಳು
ಮಹಾಭಾರತದಲ್ಲಿ ಕೃಷ್ಣ ದೇವರ ವಿವಿಧ ಕಥೆ ಹೇಳುವ ಮೂರ್ತಿಗಳು
ದುರ್ಗೆಯ ವಿವಿಧ ಅವತಾರಗಳು. ಈ ಮೂರ್ತಿಗಳನ್ನು ಕೃಷ್ಣನ್ ಪಾಂಡಿಚೆರಿಯಿಂದ ಕೊಂಡುತಂದು ಸಂಗ್ರಹಿಸಿಟ್ಟಿದ್ದಾರೆ.