ದಶಪಥ ಹೆದ್ದಾರಿ; ಚನ್ನಪಟ್ಟಣದ ವಿಶ್ವವಿಖ್ಯಾತ ‘ಆಟಿಕೆಗಳ ನಾಡು' ಖ್ಯಾತಿ ಅಂತ್ಯ!!

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಭರದಿಂದ ಸಾಗುತ್ತಿರುವ ಕಾರಣ ಇದೆಲ್ಲವೂ ಶೀಘ್ರದಲ್ಲೇ ಚನ್ನಪಟ್ಟಣದ ವಿಶ್ವವಿಖ್ಯಾತ ‘ಆಟಿಕೆಗಳ ನಾಡು' ಖ್ಯಾತಿ ಅಂತ್ಯವಾಗಬಹುದು ಎಂಬ ಭೀತಿ ಎದುರಾಗಿದೆ. 
ನೂರಾರು ವರ್ಷಗಳ ಹಿಂದಿನ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಆಟಿಕೆಗಳ ನಾಡು ಚನ್ನಪಟ್ಟಣವು ಮರದ ಕರಕುಶಲ ಮತ್ತು ನುರಿತ ಕುಶಲಕರ್ಮಿಗಳಿಗೆ ಹೆಸರುವಾಸಿಯಾಗಿದೆ. ರಾಮನಗರ ಜಿಲ್ಲೆಯ ತಾಲೂಕು ಕೇಂದ್ರವಾದ ಚನ್ನಪಟ್ಟಣವು ಆಟಿಕೆಗಳು ಮತ್ತು ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿದೆ.
ನೂರಾರು ವರ್ಷಗಳ ಹಿಂದಿನ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಆಟಿಕೆಗಳ ನಾಡು ಚನ್ನಪಟ್ಟಣವು ಮರದ ಕರಕುಶಲ ಮತ್ತು ನುರಿತ ಕುಶಲಕರ್ಮಿಗಳಿಗೆ ಹೆಸರುವಾಸಿಯಾಗಿದೆ. ರಾಮನಗರ ಜಿಲ್ಲೆಯ ತಾಲೂಕು ಕೇಂದ್ರವಾದ ಚನ್ನಪಟ್ಟಣವು ಆಟಿಕೆಗಳು ಮತ್ತು ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿದೆ.
Updated on
ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಭರದಿಂದ ಸಾಗುತ್ತಿರುವ ಕಾರಣ ಇದೆಲ್ಲವೂ ಶೀಘ್ರದಲ್ಲೇ ಇತಿಹಾಸವಾಗಬಹುದು ಎಂಬ ಭೀತಿ ಎದುರಾಗಿದೆ.
ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಭರದಿಂದ ಸಾಗುತ್ತಿರುವ ಕಾರಣ ಇದೆಲ್ಲವೂ ಶೀಘ್ರದಲ್ಲೇ ಇತಿಹಾಸವಾಗಬಹುದು ಎಂಬ ಭೀತಿ ಎದುರಾಗಿದೆ.
ಎಕ್ಸ್‌ಪ್ರೆಸ್‌ವೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದಿದ್ದರೂ ಸಾವಿರಾರು ಜನರ ಜೀವನೋಪಾಯವನ್ನು ಕಿತ್ತುಕೊಂಡಿದೆ. ಈ ಕಾರಿಡಾರ್ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೈಲು ಮೇಲ್ಸೇತುವೆಗಳನ್ನು ಹೊಂದಿದೆ.
ಎಕ್ಸ್‌ಪ್ರೆಸ್‌ವೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದಿದ್ದರೂ ಸಾವಿರಾರು ಜನರ ಜೀವನೋಪಾಯವನ್ನು ಕಿತ್ತುಕೊಂಡಿದೆ. ಈ ಕಾರಿಡಾರ್ ಒಂಬತ್ತು ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೈಲು ಮೇಲ್ಸೇತುವೆಗಳನ್ನು ಹೊಂದಿದೆ.
ಒಮ್ಮೆ ಸಂಪೂರ್ಣವಾಗಿ ಕಾರ್ಯಗತಗೊಂಡ ನಂತರ, 117-ಕಿಮೀ ಹೆದ್ದಾರಿ -- ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್‌ವರೆಗೆ -- ಪ್ರಯಾಣದ ಸಮಯವನ್ನು ಸರಾಸರಿ ಮೂರು ಗಂಟೆಗಳಿಂದ ಸುಮಾರು 90 ನಿಮಿಷಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದೆ.
ಒಮ್ಮೆ ಸಂಪೂರ್ಣವಾಗಿ ಕಾರ್ಯಗತಗೊಂಡ ನಂತರ, 117-ಕಿಮೀ ಹೆದ್ದಾರಿ -- ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್‌ವರೆಗೆ -- ಪ್ರಯಾಣದ ಸಮಯವನ್ನು ಸರಾಸರಿ ಮೂರು ಗಂಟೆಗಳಿಂದ ಸುಮಾರು 90 ನಿಮಿಷಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದೆ.
ಆದರೆ ಅಂತೆಯೇ ಮತ್ತೊಂದು ಭಾಗದಲ್ಲಿ ಈ ಮಾರ್ಗದಲ್ಲಿ ಅಭಿವೃದ್ಧಿ ಹೊಂದುವ ವ್ಯವಹಾರಗಳು ಮತ್ತು ಐತಿಹಾಸಿಕ ಆಟಿಕೆ ಅಂಗಡಿಗಳೂ ಕೂಡ ಮುಚ್ಚಲ್ಪಡುತ್ತವೆ. ಈ ಕುರಿತ ಸಮೀಕ್ಷೆಯು ಕಠೋರ ಚಿತ್ರವನ್ನು ಚಿತ್ರಿಸುತ್ತದೆ.
ಆದರೆ ಅಂತೆಯೇ ಮತ್ತೊಂದು ಭಾಗದಲ್ಲಿ ಈ ಮಾರ್ಗದಲ್ಲಿ ಅಭಿವೃದ್ಧಿ ಹೊಂದುವ ವ್ಯವಹಾರಗಳು ಮತ್ತು ಐತಿಹಾಸಿಕ ಆಟಿಕೆ ಅಂಗಡಿಗಳೂ ಕೂಡ ಮುಚ್ಚಲ್ಪಡುತ್ತವೆ. ಈ ಕುರಿತ ಸಮೀಕ್ಷೆಯು ಕಠೋರ ಚಿತ್ರವನ್ನು ಚಿತ್ರಿಸುತ್ತದೆ.
ಉದಾಹರಣೆಗೆ ಶ್ರೀ ಮೀನಾಕ್ಷಿ ಕರಕುಶಲ ಅಂಗಡಿಯನ್ನೇ ತೆಗೆದುಕೊಳ್ಳಿ. ಚನ್ನಪಟ್ಟಣದ ದೊಡ್ಡ ಆಟಿಕೆ ಅಂಗಡಿಗಳಲ್ಲಿ ಒಂದಾದ ಇದು ಈಗ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ. ಇತ್ತೀಚಿನವರೆಗೂ ಚಟುವಟಿಕೆಯಿಂದ ಗಿಜಿಗುಡುತ್ತಿದ್ದ ಇಲ್ಲಿನ ಸಿಬ್ಬಂದಿ ಸಂಖ್ಯೆ ಮೊದಲಿನ 15ರಿಂದ ಕೇವಲ ಎರಡಕ್ಕೆ ಇಳಿದಿದೆ.
ಉದಾಹರಣೆಗೆ ಶ್ರೀ ಮೀನಾಕ್ಷಿ ಕರಕುಶಲ ಅಂಗಡಿಯನ್ನೇ ತೆಗೆದುಕೊಳ್ಳಿ. ಚನ್ನಪಟ್ಟಣದ ದೊಡ್ಡ ಆಟಿಕೆ ಅಂಗಡಿಗಳಲ್ಲಿ ಒಂದಾದ ಇದು ಈಗ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ. ಇತ್ತೀಚಿನವರೆಗೂ ಚಟುವಟಿಕೆಯಿಂದ ಗಿಜಿಗುಡುತ್ತಿದ್ದ ಇಲ್ಲಿನ ಸಿಬ್ಬಂದಿ ಸಂಖ್ಯೆ ಮೊದಲಿನ 15ರಿಂದ ಕೇವಲ ಎರಡಕ್ಕೆ ಇಳಿದಿದೆ.
ಕೋಟ್ಯಂತರ ರೂಪಾಯಿ ಮೌಲ್ಯದ ಕೈಯಿಂದ ಮಾಡಿದ ಮರದ ಆಟಿಕೆಗಳು ಮಾರಾಟವಾಗದೆ ಆಂಗಡಿಗಳಲ್ಲೇ ಬಿದ್ದಿವೆ. ಇದು ಕೇವಲ ಈ ಅಂಗಡಿಯ ಕಥೆಯಷ್ಟೇ ಅಲ್ಲ.. ಹಳೆಯ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಚನ್ನಪಟ್ಟಣ ಮತ್ತು ಸುತ್ತಮುತ್ತಲಿನ ಇಂತಹ ಅನೇಕ ಆಟಿಕೆ ಎಂಪೋರಿಯಂಗಳ ಕಥೆ ಕೂಡ ಆಗಿದೆ.
ಕೋಟ್ಯಂತರ ರೂಪಾಯಿ ಮೌಲ್ಯದ ಕೈಯಿಂದ ಮಾಡಿದ ಮರದ ಆಟಿಕೆಗಳು ಮಾರಾಟವಾಗದೆ ಆಂಗಡಿಗಳಲ್ಲೇ ಬಿದ್ದಿವೆ. ಇದು ಕೇವಲ ಈ ಅಂಗಡಿಯ ಕಥೆಯಷ್ಟೇ ಅಲ್ಲ.. ಹಳೆಯ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಚನ್ನಪಟ್ಟಣ ಮತ್ತು ಸುತ್ತಮುತ್ತಲಿನ ಇಂತಹ ಅನೇಕ ಆಟಿಕೆ ಎಂಪೋರಿಯಂಗಳ ಕಥೆ ಕೂಡ ಆಗಿದೆ.
ಚನ್ನಪಟ್ಟಣದ ಕಲಾನಗರದ 400ಕ್ಕೂ ಹೆಚ್ಚು ಕುಟುಂಬಗಳು ಆಟಿಕೆಗಳನ್ನು ತಯಾರಿಸಿ ಮುಖ್ಯರಸ್ತೆಯಲ್ಲಿರುವ ದೊಡ್ಡ ಅಂಗಡಿಗಳಿಗೆ ಸರಬರಾಜು ಮಾಡುತ್ತಿವೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಅಂಗಡಿಗಳು ಕುಶಲಕರ್ಮಿಗಳಿಗೆ ಆರ್ಡರ್ ನೀಡುವುದನ್ನೇ ನಿಲ್ಲಿಸಿವೆ.
ಚನ್ನಪಟ್ಟಣದ ಕಲಾನಗರದ 400ಕ್ಕೂ ಹೆಚ್ಚು ಕುಟುಂಬಗಳು ಆಟಿಕೆಗಳನ್ನು ತಯಾರಿಸಿ ಮುಖ್ಯರಸ್ತೆಯಲ್ಲಿರುವ ದೊಡ್ಡ ಅಂಗಡಿಗಳಿಗೆ ಸರಬರಾಜು ಮಾಡುತ್ತಿವೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಅಂಗಡಿಗಳು ಕುಶಲಕರ್ಮಿಗಳಿಗೆ ಆರ್ಡರ್ ನೀಡುವುದನ್ನೇ ನಿಲ್ಲಿಸಿವೆ.
ಕಳೆದ 70 ರಿಂದ 100 ವರ್ಷಗಳಿಂದ ನಡೆಯುತ್ತಿರುವ ರಾಮನಗರದ ಬಿಡದಿ ಮತ್ತು ಮದ್ದೂರಿನ ಮದ್ದೂರು ಟಿಫಾನಿಸ್‌ನ ಪ್ರಸಿದ್ಧ ಇಡ್ಲಿ ಜಾಯಿಂಟ್‌ಗಳು ಸಹ ಎಕ್ಸ್‌ಪ್ರೆಸ್‌ವೇ ಬೈಪಾಸ್‌ನಿಂದ ಮುಚ್ಚುವ ಅಪಾಯವನ್ನು ಎದುರಿಸುತ್ತಿವೆ.
ಕಳೆದ 70 ರಿಂದ 100 ವರ್ಷಗಳಿಂದ ನಡೆಯುತ್ತಿರುವ ರಾಮನಗರದ ಬಿಡದಿ ಮತ್ತು ಮದ್ದೂರಿನ ಮದ್ದೂರು ಟಿಫಾನಿಸ್‌ನ ಪ್ರಸಿದ್ಧ ಇಡ್ಲಿ ಜಾಯಿಂಟ್‌ಗಳು ಸಹ ಎಕ್ಸ್‌ಪ್ರೆಸ್‌ವೇ ಬೈಪಾಸ್‌ನಿಂದ ಮುಚ್ಚುವ ಅಪಾಯವನ್ನು ಎದುರಿಸುತ್ತಿವೆ.
1959ರಲ್ಲಿ ಆರಂಭವಾದ ಬಿಡದಿ ತಟ್ಟೆ ಇಡ್ಲಿ ಖ್ಯಾತಿಯ ರೇಣುಕಾಂಬ ತಟ್ಟೆ ಇಡ್ಲಿ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ. ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡಾಗ ಪ್ರಯಾಣಿಕರು ಬಿಡದಿಯನ್ನು ಮುಟ್ಟದೆ ನೇರವಾಗಿ ರಾಮನಗರದಲ್ಲಿ ಇಳಿಯುತ್ತಾರೆ ಎಂದು ಜಂಟಿ ಮೂರನೇ ತಲೆಮಾರಿನ ಮಾಲೀಕ ಸುರೇಶ್ ಬಾಬು ಎಚ್‌ಕೆ ಹೇಳಿದ್ದಾರೆ.
1959ರಲ್ಲಿ ಆರಂಭವಾದ ಬಿಡದಿ ತಟ್ಟೆ ಇಡ್ಲಿ ಖ್ಯಾತಿಯ ರೇಣುಕಾಂಬ ತಟ್ಟೆ ಇಡ್ಲಿ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ. ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡಾಗ ಪ್ರಯಾಣಿಕರು ಬಿಡದಿಯನ್ನು ಮುಟ್ಟದೆ ನೇರವಾಗಿ ರಾಮನಗರದಲ್ಲಿ ಇಳಿಯುತ್ತಾರೆ ಎಂದು ಜಂಟಿ ಮೂರನೇ ತಲೆಮಾರಿನ ಮಾಲೀಕ ಸುರೇಶ್ ಬಾಬು ಎಚ್‌ಕೆ ಹೇಳಿದ್ದಾರೆ.
ಅಂತೆಯೇ ಮದ್ದೂರು ಟಿಫಾನಿಸ್ ಮ್ಯಾನೇಜರ್‌ಗಳದ್ದೂ ಇದೇ ಕಥೆ. ಶತಮಾನದಷ್ಟು ಹಳೆಯದಾದ ಮದ್ದೂರು ವಡೆಯನ್ನು ಕಳೆದ 34 ವರ್ಷಗಳಿಂದ ಮಾರಾಟ ಮಾಡುತ್ತಿರುವ ಈ ತಿನಿಸು ಇದೀಗ ಎಕ್ಸ್‌ಪ್ರೆಸ್‌ವೇಯ ನಿಡಘಟ್ಟ ಬಳಿ ಪರ್ಯಾಯ ಸ್ಥಳವನ್ನು ಹುಡುಕುತ್ತಿದೆ.
ಅಂತೆಯೇ ಮದ್ದೂರು ಟಿಫಾನಿಸ್ ಮ್ಯಾನೇಜರ್‌ಗಳದ್ದೂ ಇದೇ ಕಥೆ. ಶತಮಾನದಷ್ಟು ಹಳೆಯದಾದ ಮದ್ದೂರು ವಡೆಯನ್ನು ಕಳೆದ 34 ವರ್ಷಗಳಿಂದ ಮಾರಾಟ ಮಾಡುತ್ತಿರುವ ಈ ತಿನಿಸು ಇದೀಗ ಎಕ್ಸ್‌ಪ್ರೆಸ್‌ವೇಯ ನಿಡಘಟ್ಟ ಬಳಿ ಪರ್ಯಾಯ ಸ್ಥಳವನ್ನು ಹುಡುಕುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com