ಫೋಟೋ ಕ್ಲಿಕ್ ಜೂನ್ 2019

ದೇಶ ಸೇವೆಗೆ ಹೊರಟ ಧೋನಿ.... ಲೆಫ್ಟಿನಂಟ್ ಕರ್ನಲ್ ಆಗಿ 15 ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕಾಗಿ ಶ್ರೀನಗರಕ್ಕೆ ತೆರಳುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮಂಗಳವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿದ್ದು ಹೀಗೆ.
ದೇಶ ಸೇವೆಗೆ ಹೊರಟ ಧೋನಿ.... ಲೆಫ್ಟಿನಂಟ್ ಕರ್ನಲ್ ಆಗಿ 15 ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕಾಗಿ ಶ್ರೀನಗರಕ್ಕೆ ತೆರಳುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮಂಗಳವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿದ್ದು ಹೀಗೆ.
Updated on
ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ವಿತ್ತ ಜಗತ್ತು, ತಿಳಿಯಬೇಕಾದ ವಿಷಯ ಹಲವು ಹತ್ತು, ಟಿ.ಜಿ ಶ್ರೀನಿಧಿ ಅವರ ಟೆಕ್ ಲೋಕದ ಹತ್ತು ಹೊಸ ಮುಖಗಳು ಪುಸ್ತಕಗಳನ್ನು ಜು.14 ರಂದು ತೇಜಸ್ವಿನಿ ಅನಂತ್ ಕುಮಾರ್, ಬರಹಗಾರ ವಸುಧೇಂದ್ರ ಬಿಡುಗಡೆ ಮಾಡಿದರು.
ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ವಿತ್ತ ಜಗತ್ತು, ತಿಳಿಯಬೇಕಾದ ವಿಷಯ ಹಲವು ಹತ್ತು, ಟಿ.ಜಿ ಶ್ರೀನಿಧಿ ಅವರ ಟೆಕ್ ಲೋಕದ ಹತ್ತು ಹೊಸ ಮುಖಗಳು ಪುಸ್ತಕಗಳನ್ನು ಜು.14 ರಂದು ತೇಜಸ್ವಿನಿ ಅನಂತ್ ಕುಮಾರ್, ಬರಹಗಾರ ವಸುಧೇಂದ್ರ ಬಿಡುಗಡೆ ಮಾಡಿದರು.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಭಾರತ ಪಂದ್ಯವನ್ನು ಸಂಸದ ಶಶಿ ತರೂರ್ ವೀಕ್ಷಿಸಿದರು. ಮಹಿಳೆಯೊಂದಿಗೆ ಮಾತನಾಡುತ್ತಿರುವ ಶಶಿ ತರೂರ್ ನ್ನು ಟ್ವಿಟರ್ ನಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಭಾರತ ಪಂದ್ಯವನ್ನು ಸಂಸದ ಶಶಿ ತರೂರ್ ವೀಕ್ಷಿಸಿದರು. ಮಹಿಳೆಯೊಂದಿಗೆ ಮಾತನಾಡುತ್ತಿರುವ ಶಶಿ ತರೂರ್ ನ್ನು ಟ್ವಿಟರ್ ನಲ್ಲಿ ಟ್ರೋಲ್ ಮಾಡಲಾಗುತ್ತಿದೆ.
<b>ಸಾಲು ಮರದ ತಿಮ್ಮಕ್ಕನಿಗೆ ಸನ್ಮಾನ...</b> ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಡಿಸಿಎಂ ಪರಮೇಶ್ವರ್ ಅವರು ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಸಾಲುಮರದ ತಿಮ್ಮಕ್ಕ ನ್ಯಾಷನಲ್‌ ಗ್ರೀನರಿ ಅವಾರ್ಡ್‌ 2018-19ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಿಮ್ಮಕ್ಕ ಅವರನ್ನು ಸನ್ಮಾನಿಸಿ
ಸಾಲು ಮರದ ತಿಮ್ಮಕ್ಕನಿಗೆ ಸನ್ಮಾನ... ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಡಿಸಿಎಂ ಪರಮೇಶ್ವರ್ ಅವರು ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಸಾಲುಮರದ ತಿಮ್ಮಕ್ಕ ನ್ಯಾಷನಲ್‌ ಗ್ರೀನರಿ ಅವಾರ್ಡ್‌ 2018-19ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಿಮ್ಮಕ್ಕ ಅವರನ್ನು ಸನ್ಮಾನಿಸಿ
<b>ತಾರೆಯರ ಸೆಲ್ಫಿ ಸಂಭ್ರಮ....</b> ಮುಂಬೈನಲ್ಲಿ ಸೋಮವಾರ ಡ್ಯಾನ್ಸ್ ದೀವಾನೆ ಟಿವಿ ಕಾರ್ಯಕ್ರಮದ ಸೆಟ್ ನಲ್ಲಿ ಬಾಲಿವುಡ್ ನಟಿ ಮಾಧುರಿ ದಿಕ್ಷಿತ್ ಅವರು ನಟ ಗೋವಿಂದ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ್ದು ಹೀಗೆ.
ತಾರೆಯರ ಸೆಲ್ಫಿ ಸಂಭ್ರಮ.... ಮುಂಬೈನಲ್ಲಿ ಸೋಮವಾರ ಡ್ಯಾನ್ಸ್ ದೀವಾನೆ ಟಿವಿ ಕಾರ್ಯಕ್ರಮದ ಸೆಟ್ ನಲ್ಲಿ ಬಾಲಿವುಡ್ ನಟಿ ಮಾಧುರಿ ದಿಕ್ಷಿತ್ ಅವರು ನಟ ಗೋವಿಂದ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ್ದು ಹೀಗೆ.
<b>ಮಲ್ಲಕಂಬ ಯೋಗ.... </b>ಐದನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೆಹಲಿಯ ರಾಜಪತ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನದ ವೇಳೆ ವ್ಯಕ್ತಿಯೊಬ್ಬರ ಮಲ್ಲಕಂಬ ಯೋಗ ಎಲ್ಲರ ಗಮನ ಸೆಳೆಯಿತು.
ಮಲ್ಲಕಂಬ ಯೋಗ.... ಐದನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೆಹಲಿಯ ರಾಜಪತ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನದ ವೇಳೆ ವ್ಯಕ್ತಿಯೊಬ್ಬರ ಮಲ್ಲಕಂಬ ಯೋಗ ಎಲ್ಲರ ಗಮನ ಸೆಳೆಯಿತು.
<b>ಹುತಾತ್ಮ ಮೇಜರ್ ಗೆ ಅಂತಿಮ ನಮನ....</b>. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೋಮವಾರ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮರಾದ ಮೇಜರ್ ಕೇತನ್ ಶರ್ಮಾ ಅವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ದೆಹಲಿಯ ಪಾಲಮ್ ವಿಮಾನ ನಿಲ್ದಾಣದಲ್ಲಿ ಅಂತಿಮ ನಮನ ಸಲ್ಲಿಸಿದರು.
ಹುತಾತ್ಮ ಮೇಜರ್ ಗೆ ಅಂತಿಮ ನಮನ..... ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸೋಮವಾರ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮರಾದ ಮೇಜರ್ ಕೇತನ್ ಶರ್ಮಾ ಅವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ದೆಹಲಿಯ ಪಾಲಮ್ ವಿಮಾನ ನಿಲ್ದಾಣದಲ್ಲಿ ಅಂತಿಮ ನಮನ ಸಲ್ಲಿಸಿದರು.
<b>ಪ್ರಧಾನಿ ಮೋದಿಗೆ ಛತ್ರಿ ಹಿಡಿದ ಕಿರ್ಗಿಸ್ತಾನದ ಅಧ್ಯಕ್ಷ....</b> ಶುಕ್ರವಾರ ಎಸ್ ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಬಿಶ್ಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿರ್ಗಿಸ್ತಾನದ ಅಧ್ಯಕ್ಷ ಸೂರನ್ಬೆ ಜೀನ್ಬೆಕುವ್ ಅವರು ಸ್ವತಃ ತಾವೇ ಛತ್ರಿ ಹಿಡಿದು ಸ್ವಾಗತಿಸಿದ್ದರು.
ಪ್ರಧಾನಿ ಮೋದಿಗೆ ಛತ್ರಿ ಹಿಡಿದ ಕಿರ್ಗಿಸ್ತಾನದ ಅಧ್ಯಕ್ಷ.... ಶುಕ್ರವಾರ ಎಸ್ ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಬಿಶ್ಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿರ್ಗಿಸ್ತಾನದ ಅಧ್ಯಕ್ಷ ಸೂರನ್ಬೆ ಜೀನ್ಬೆಕುವ್ ಅವರು ಸ್ವತಃ ತಾವೇ ಛತ್ರಿ ಹಿಡಿದು ಸ್ವಾಗತಿಸಿದ್ದರು.
<b>ದಾಹ ತೀರಿಸಿಕೊಳ್ಳಲು ಮಂಗಗಳ ಸಾಹಸ...</b>. ಜಮ್ಮುವಿನ ಬಹುಪೋರ್ಟ್ ಪಾರ್ಕ್ ನಲ್ಲಿ ಮಂಗಳವಾರ ಮಂಗಗಳು ನೀರಿನ ದಾಹ ತೀರಿಸಿಕೊಂಡಿದ್ದು ಹೀಗೆ.
ದಾಹ ತೀರಿಸಿಕೊಳ್ಳಲು ಮಂಗಗಳ ಸಾಹಸ.... ಜಮ್ಮುವಿನ ಬಹುಪೋರ್ಟ್ ಪಾರ್ಕ್ ನಲ್ಲಿ ಮಂಗಳವಾರ ಮಂಗಗಳು ನೀರಿನ ದಾಹ ತೀರಿಸಿಕೊಂಡಿದ್ದು ಹೀಗೆ.
<b>ಸಚಿನ್ ಪೈಲಟ್ ಗ್ರಾಮ ವಾಸ್ತವ್ಯ....</b> ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ರಾಜಸ್ಥಾನದ ಸಂಚೋರ್ ಜಿಲ್ಲೆಯ ಕಸೆಲಾ ಗ್ರಾಮದಲ್ಲಿ ಸೋಮವಾರ ವಾಸ್ತವ್ಯ ಮಾಡಿದ್ದು, ಬೆಳಗ್ಗೆ ಅಲ್ಲಿನ ರೈತರೊಂದಿಗೆ ಬೇವಿನ ಕಡ್ಡಿಯಿಂದ ಹಲ್ಲುಜ್ಜಿದರು.
ಸಚಿನ್ ಪೈಲಟ್ ಗ್ರಾಮ ವಾಸ್ತವ್ಯ.... ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ರಾಜಸ್ಥಾನದ ಸಂಚೋರ್ ಜಿಲ್ಲೆಯ ಕಸೆಲಾ ಗ್ರಾಮದಲ್ಲಿ ಸೋಮವಾರ ವಾಸ್ತವ್ಯ ಮಾಡಿದ್ದು, ಬೆಳಗ್ಗೆ ಅಲ್ಲಿನ ರೈತರೊಂದಿಗೆ ಬೇವಿನ ಕಡ್ಡಿಯಿಂದ ಹಲ್ಲುಜ್ಜಿದರು.
<b>ನಾಯಿ v/s ಕೋತಿ.... </b>ಬೆಂಗಳೂರಿನ ಆರ್ ಟಿ ನಗರದ ಶಾಲೆಯೊಂದರ ಬಳಿ ನಾಯಿ ಗೇಟ್ ಮೇಲೆ ಕುಳಿತಿದ್ದ ಕೋತಿ ಮೇಲೆ ದಾಳಿ ಮಾಡಲು ಯತ್ನಿಸಿದ್ದು ಹೀಗೆ.
ನಾಯಿ v/s ಕೋತಿ.... ಬೆಂಗಳೂರಿನ ಆರ್ ಟಿ ನಗರದ ಶಾಲೆಯೊಂದರ ಬಳಿ ನಾಯಿ ಗೇಟ್ ಮೇಲೆ ಕುಳಿತಿದ್ದ ಕೋತಿ ಮೇಲೆ ದಾಳಿ ಮಾಡಲು ಯತ್ನಿಸಿದ್ದು ಹೀಗೆ.
<b>ದೇವರಾಜು ಅರಸು ಪುಣ್ಯಸ್ಮರಣೆ....</b> ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ಅವರ 37ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಧಾನಸೌಧದ ಆವರಣದಲ್ಲಿರುವ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ದೇವರಾಜು ಅರಸು ಪುಣ್ಯಸ್ಮರಣೆ.... ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ಅವರ 37ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಧಾನಸೌಧದ ಆವರಣದಲ್ಲಿರುವ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
<div><b>ಮಳೆಗಾಗಿ ಡಿಕೆಶಿ ವಿಶೇಷ ಪೂಜೆ... </b>ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಿಗ್ಗಾ ಗ್ರಾಮದಲ್ಲಿರುವ ಋಷ್ಯಶೃಂಗ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.</div><div><br></div>
ಮಳೆಗಾಗಿ ಡಿಕೆಶಿ ವಿಶೇಷ ಪೂಜೆ... ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಿಗ್ಗಾ ಗ್ರಾಮದಲ್ಲಿರುವ ಋಷ್ಯಶೃಂಗ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.

<b>ದೀಪಾಲಂಕಾರದಿಂದ ಕಂಗೊಳಿಸಿದ ಇಂಡಿಯಾ ಗೇಟ್.... </b>ದೆಹಲಿಯ ಇಂಡಿಯಾ ಗೇಟ್ ದೀಪಾಲಂಕಾರ ಪ್ರವಾಸಿಗರ ಗಮನ ಸೆಳೆಯಿತು.
ದೀಪಾಲಂಕಾರದಿಂದ ಕಂಗೊಳಿಸಿದ ಇಂಡಿಯಾ ಗೇಟ್.... ದೆಹಲಿಯ ಇಂಡಿಯಾ ಗೇಟ್ ದೀಪಾಲಂಕಾರ ಪ್ರವಾಸಿಗರ ಗಮನ ಸೆಳೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com