ದೇಶಾದ್ಯಂತ ಅಲ್ಲಲ್ಲಿ ಈಗ ಮಳೆಯ ಅಬ್ಬರ. ಹಲವು ನಗರ, ಗ್ರಾಮೀಣ ಪ್ರದೇಶಗಳಲ್ಲಿ ನೀರು ತುಂಬಿ ಪ್ರವಾಹದ ಪರಿಸ್ಥಿತಿಯುಂಟಾಗಿದೆ. ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ದೆಹಲಿಯ ಮಿಂಟೊ ಬ್ರಿಡ್ಜ್ ಸಮೀಪ ಭಾರೀ ಮಳೆಗೆ ರಸ್ತೆಯಲ್ಲಿ ಮುಳುಗಡೆಯಾಗಿರುವ ಕಾರನ್ನು ತೆಗೆಯಲು ಹರಸಾಹಸಪಡುತ್ತಿರುವ ಜನರು.
ಆಂಧ್ರ ಪ್ರದೇಶದ ವಿಜಯವಾಡದ ಐಜಿಎಂಸಿ ಮೈದಾನದಲ್ಲಿ ಜಾಗೃತಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಕೊಚ್ಚೆಯಾಗಿರುವ ಸ್ಥಳದಲ್ಲಿ ಕಲ್ಲಿನಲ್ಲಿ ನಡೆದುಕೊಂಡು ಹೋಗುತ್ತಿರುವುದು.
ಕೇರಳದ ವಯನಾಡಿನ ವಲ್ಲಿಯೂರ್ಕಾವು ಎಂಬಲ್ಲಿ ರಸ್ತೆಯಲ್ಲಿ ಉಂಟಾಗಿರುವ ಪ್ರವಾಹದ ಮಧ್ಯೆ ದಾಟುತ್ತಿರುವ ತಂದೆ-ಮಗಳು
ಚೆನ್ನೈ ನಗರದಲ್ಲಿ ಕೂಡ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆ.
ಪಂಜಾಬ್ ನ ಲುಧಿಯಾನ ರಸ್ತೆಯಲ್ಲಿ ಮಳೆಗೆ ನೀರು ತುಂಬಿಕೊಂಡಿರುವುದು.
ಮಹಾರಾಷ್ಟ್ರದಲ್ಲಿ ಕೂಡ ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಮುಂಬೈಯ ದಾದರ್ ಪೂರ್ವದಲ್ಲಿರುವ ಬಿಜೆಪಿ ಕಚೇರಿಗೆ ಪ್ರವಾಹ ಉಂಟಾಗಿರುವ ರಸ್ತೆಯಲ್ಲಿಯೇ ಸಾಗುತ್ತಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಮತ್ತು ಮಹಾರಾಷ್ಟ್ರ ರಾಜ್ಯ ವಕ್ತಾರ ಕೇಶವ್ ಉಪಾಧ್ಯೆ.
ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಮೇಯರ್ ಅಲೋಕ್ ಶರ್ಮ ನೀರು ತುಂಬಿದ ರಸ್ತೆಯಲ್ಲಿ ಕುಳಿತು ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.