ಸಭೆಯ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಮೇಶ್ ಜಾರಕಿಹೊಳಿಯವರ ರಕ್ತದಲ್ಲಿ ಮತ್ತು ಡಿಎನ್ಎಯಲ್ಲಿ ಕಾಂಗ್ರೆಸ್ ಇದೆ. ಕಾಂಗ್ರೆಸ್ ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಬೇರೆ ನೋವಿನಿಂದ ಅವರು ಅಸಂತೋಷಗೊಂಡಿದ್ದಾರೆ. ಬೇರೆ ಯಾವ ನೋವು ಅವರಲ್ಲಿದೆ ಎಂದು ಅವರು ಹೇಳಿಲ್ಲ ಎಂದಾಗ ಅದೇನು ಎಂದು ಸುದ್ದಿಗಾರರು ಕೇಳಿದ್ದಕ್ಕೆ ಬೇರೆ ಪ್ರಶ್ನೆ ಕೇಳಿ ಎಂದರು.