ವಿಧಾನಸೌಧಕ್ಕೆ ಆಗಮಿಸಿದ್ದ ರಾಜಣ್ಣ, ಯಡಿಯೂರಪ್ಪ ಅವರೊಂದಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದ ಮುಂಭಾಗದ ಕಾರಿಡಾರ್ ನಲ್ಲಿ ಗುಸು ಗುಸು ಸಮಾಲೋಚನೆ ನಡೆಸಿದರು. ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಜೊತೆ ಆಗಮಿಸಿದ ಕೆ.ಎನ್ .ರಾಜಣ್ಣ, ಮುಖ್ಯಮಂತ್ರಿ ಅವರ ಕಿವಿಯಲ್ಲಿ ಏನೋ ಗಹನವಾದ ಮಾಹಿತಿ ಹೇಳುತ್ತಿರುವಂತೆ ಕಂಡು ಬಂತು.