ವಿಧಾನಸಭೆ ಪ್ರತಿಪಕ್ಷ ಸ್ಥಾನಕ್ಕೆ ನಾಯಕನನ್ನು ಆಯ್ಕೆಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರಿಗೆ ವಹಿಸಿದೆ, ಹೀಗಾಗಿ ಪಕ್ಷವನ್ನು 120 ಸೀಟುಗಳಿಂದ ಗೆಲ್ಲಿಸುವಂತ ವ್ಯಕ್ತಿಗಾಗಿ ಭೇಟೆ ಆರಂಭಿಸಿದೆ. ಕುಂದಗೋಳ ಉಪ ಚುನಾವಣೆಯಲ್ಲಿ ದಿವಂಗತ ಸಿಎಸ್ ಶಿವಳ್ಳಿ ಅವರ ಪತ್ನಿಯನ್ನು ಗೆಲ್ಲಿಸುವಲ್ಲಿ ಡಿಕೆ ಶಿವಕುಮಾರ್, ಪ್ರಮುಖ ಪಾತ್ರ ವಹಿಸಿದ್ದರು, ಹಾಗೆಯೇ 2018ರ ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಕೈ ಅಭ್ಯರ್ಥಿ ವಿ,ಎಸ್ ಉಗ್ರಪ್ಪ ಅವರನ್ನು ಗೆಲ್ಲಿಸಿದ್ದರು., ಶಿವಕುಮಾರ್ ಅವರ ಟ್ರಬಲ್ ಶೂಟಿಂಗ್ ಕೌಶಲ್ಯ ಹಾಗೂ ಸೂಕ್ಷ್ಮ ಸಂದರ್ಭಗಶಳಲ್ಲಿ, ಸಮ್ಮಿಶ್ರ ಸರ್ಕಾರವನ್ನು ಬಚಾವ್ ಮಾಡಲು ಹಲವು ತಂತ್ರ ರೂಪಿಸಿದ್ದರು.