ಇದೇ ವೇಳೆ ಇತ್ತೀಚಿಗೆ ಮೃತಪಟ್ಟ ಎಸ್ ಎಂ ಕೃಷ್ಣ ಅಳಿಯ ಹಾಗೂ ಉದ್ಯಮಿ ಸಿದ್ದಾರ್ಥ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, 1988-89ರಿಂದಲೂ ಸಿದ್ದಾರ್ಥ್ ಬಗ್ಗೆ ಗೊತ್ತು. 50 ಸಾವಿರ ಕುಟುಂಬಗಳು ಅವರ ಮೇಲೆ ಅವಲಂಬಿತರಾಗಿದ್ದಾರೆ. ಸ್ವಾಭಿಮಾನಿಯಾಗಿ ಬದುಕಿದ್ದರು. ಬ್ಯಾಂಕುಗಳನ್ನು ಅವರು ಏಕೆ ಕೋರಲಿಲ್ಲ ಎಂಬುದು ನನ್ನಗೆ ಗೊತ್ತಿಲ್ಲ. ನನ್ನ ರಾಜಕೀಯ ಜೀವನದಲ್ಲಿ ನೋಡಿದ ದೊಡ್ಡ ದುರ್ಘಟನೆಗಳಲ್ಲಿ ಇದು ಒಂದಾಗಿದೆ. ಐಟಿ ದಾಳಿಗಳ ಬಗ್ಗೆ ನೋಡಿದ್ದೇನೆ. ಆದರೆ, ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.