ಬೆಂಗಳೂರು: ಕೆಲವರು ಕುಮಾರಸ್ವಾಮಿ ಅವರನ್ನು ಹೊಗಳುತ್ತಾರೆ ಆದರೆ ಅವರೇ ಇವರಿಗೆ ಮೋಸ ಮಾಡುತ್ತಾರೆ, ಮೋಸ ಮಾಡುವವರು ಪಕ್ಷದಲ್ಲಿ ಇರುವವರೆಗೂ ಜೆಡಿಎಸ್ ಉದ್ದಾರ ಆಗುವುದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಪಕ್ಷಕ್ಕಾಗಿ ಏನನ್ನೂ ಮಾಡಿಲ್ಲ. ಬೆನ್ನಿಗೆ ಚೂರಿ ಹಾಕುವವರನ್ನು ಕುಮಾರಸ್ವಾಮಿ ನಂಬಬಾರದು. ನಂಬಿದ್ದಕ್ಕೆ ಪಕ್ಷ ಹಾಗು ಸರ್ಕಾರಕ್ಕೆ ಈ ಗತಿ ಬಂದೊದಗಿದೆ ಎಂದು ವಿಧಾನ ಪರಿಷತ್ ಸದಸ್ಯ,ಜೆಡಿಎಸ್ ಉಪಾಧ್ಯಕ್ಷ ಬಸವರಾಜ್ ಹೊರಟ್ಟಿ ಪಕ್ಷದ ನಾಯಕರಿಗೆ ತೀಕ್ಷ್ಣ ಪದಗಳಲ್ಲಿ ಟೀಕಿಸಿದ್ದಾರೆ.