ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಸ್ಪರ್ಧಿಸಿ ಸೋತಿರುವುದು ಒಳ್ಳೆಯದೆ ಆಗಿದೆ. ತಮ್ಮನ್ನು ಸೋಲಿಸಿದ ಪುಣ್ಮಾತ್ಮರು ಚೆನ್ನಾಗಿರಲಿ. ಅವರಿಗೆ ನಾನು ಕೇಡು ಬಯಸುವುದಿಲ್ಲ, ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟೋಣ, ಪಕ್ಷ ಉಳಿಸೋಣ, ಬೆಳೆಸೋಣ, ಪಕ್ಷವನ್ನು ಉಳಿಸಬೇಕಿದ್ದರೆ ಆ ಶಕ್ತಿಯನ್ನು ನೀವೇ ನಮಗೆ ನೀಡಬೆಕೆಂದು ಕೈಚಾಚಿ ಬೇಡಿಕೊಳ್ಳುತ್ತೇನೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.