'ಲಕ್ಷ್ಮಿ ಬಸ್‌ ಸ್ಟ್ಯಾಂಡ್‌ನಲ್ಲಿ ಹೂವು ಮಾರುತ್ತಿದ್ದಳು:ಎಸ್‌.ಟಿ.ಡಿ ಬೂತ್‌ನಲ್ಲಿ ಚಿಲ್ಲರೆ ಎಣಿಸುತ್ತಿದ್ದಳು'

ಬಸ್‌ ಸ್ಟ್ಯಾಂಡ್‌ನಲ್ಲಿ ಹೂವು ಮಾರುತ್ತಿದ್ದವಳು, ಎಸ್‌.ಟಿ.ಡಿ ಬೂತ್‌ನಲ್ಲಿ ಚಿಲ್ಲರೆ ಎಣಿಸುತ್ತಿದ್ದ ಹೆಣ್ಣುಮಗಳ ಬಗ್ಗೆ ಮಾತನಾಡಲ್ಲ’ ಎಂದು  ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ  ಲೇವಡಿ ಮಾಡಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್

ಗೋಕಾಕ್: ಬಸ್‌ ಸ್ಟ್ಯಾಂಡ್‌ನಲ್ಲಿ ಹೂವು ಮಾರುತ್ತಿದ್ದವಳು, ಎಸ್‌.ಟಿ.ಡಿ ಬೂತ್‌ನಲ್ಲಿ ಚಿಲ್ಲರೆ ಎಣಿಸುತ್ತಿದ್ದ ಹೆಣ್ಣುಮಗಳ ಬಗ್ಗೆ ಮಾತನಾಡಲ್ಲ’ ಎಂದು  ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ  ಲೇವಡಿ ಮಾಡಿದ್ದಾರೆ.

ಮತ ಚಲಾಯಿಸಿದ ಬಳಿಕ ಮಾತನಾಡಿದ ಜಾರಕಿಹೊಳಿ, ಲಕ್ಷ್ಮಿ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ನನ್ನ ಲೆವೆಲ್‌ ಬೇರೆ ಇದೆ’ ಎಂದು ವ್ಯಂಗ್ಯವಾಡಿದರು.

‘ಸಹೋದರ ಸತೀಶ ಅವರ ಕುಮ್ಮಕ್ಕಿನಿಂದಲೇ ನನ್ನನ್ನು ಮನೆಯಿಂದ ಹೊರಹಾಕಲಾಗಿತ್ತು. ಬಾಲ್ಯದಿಂದಲೂ ನನ್ನ ಮೇಲೆ ಹಗೆ ತೀರಿಸಿಕೊಳ್ಳುತ್ತಿದ್ದಾನೆ. ಅವನು ತುಳಿದಷ್ಟು ನಾನು ಬೆಳೆದಿದ್ದೇನೆ. ಸಹೋದರರ ನಡುವೆ ಜಗಳ ಹಚ್ಚುವುದನ್ನೇ ಮಾಡಿದ್ದಾನೆ ಎಂದು ಹರಿಹಾಯ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com