ಮತ್ತೊಂದು ಸುತ್ತಿನ 'ಆಪರೇಷನ್ ಕಮಲ' ಭೀತಿ, ಯಾರೂ ಪಕ್ಷ ತೊರೆಯುವುದಿಲ್ಲ- ಜೆಡಿಎಸ್ 

ಮತ್ತೊಂದು ಸುತ್ತಿನ ಆಫರೇಷನ್ ಕಮಲ ನಡೆಯಲಿದ್ದು, ಜೆಡಿಎಸ್ ಪಕ್ಷದ ಮತ್ತೊಂದಿಷ್ಟು ಶಾಸಕರು ಬಿಜೆಪಿಗೆ ಜಿಗೆಯಲಿದ್ದಾರೆ ಎಂಬ ಭೀತಿ ನಡುವೆ ಯಾರೂ ಕೂಡಾ ಪಕ್ಷ ತೊರೆಯುವುದಿಲ್ಲ ಎಂದು ಜೆಡಿಎಸ್ ಸ್ಪಷ್ಟಪಡಿಸಿದೆ.
ಎಚ್. ಕೆ. ಕುಮಾರಸ್ವಾಮಿ
ಎಚ್. ಕೆ. ಕುಮಾರಸ್ವಾಮಿ

ಬೆಂಗಳೂರು: ಮತ್ತೊಂದು ಸುತ್ತಿನ ಆಫರೇಷನ್ ಕಮಲ ನಡೆಯಲಿದ್ದು, ಜೆಡಿಎಸ್ ಪಕ್ಷದ ಮತ್ತೊಂದಿಷ್ಟು ಶಾಸಕರು ಬಿಜೆಪಿಗೆ ಜಿಗೆಯಲಿದ್ದಾರೆ ಎಂಬ ಭೀತಿ ನಡುವೆ ಯಾರೂ ಕೂಡಾ ಪಕ್ಷ ತೊರೆಯುವುದಿಲ್ಲ ಎಂದು ಜೆಡಿಎಸ್ ಸ್ಪಷ್ಟಪಡಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಯಾರೂ ಕೂಡಾ ಪಕ್ಷ ತೊರೆಯವುದಿಲ್ಲ , ಬಿಜೆಪಿ ಸೇರುವವರ ಬಗ್ಗೆ ಕೆ. ಆರ್. ಪೇಟೆ ಶಾಸಕ ನಾರಾಯಣಗೌಡ ಮಾಹಿತಿ ನೀಡಲಿ ಎಂದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ, ಯಾರೊಬ್ಬರು ಪಕ್ಷ ಬಿಡುವುದಿಲ್ಲ. ಬಿಜೆಪಿಗೆ ಮತ್ತಷ್ಟು ಶಾಸಕರ ಅಗತ್ಯವೂ ಇಲ್ಲ. ಇನ್ನೂ ಯಾರಾದರೂ ಹೋದರೆ, ಅವರಿಗಿಂತ ದೊಡ್ಡ ಮೂರ್ಖರಾಗಲು ಯಾರೂ ಸಾಧ್ಯವಿಲ್ಲ ಎಂದರು. ಈ ಮಧ್ಯೆ ಇತ್ತೀಚಿನ ಉಪ ಚುನಾವಣೆಯಲ್ಲಿ ಪಕ್ಷ ಸೋಲಿನ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದೆ. 

ಜ್ವರದಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇಂದು ಬೆಂಗಳೂರು ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ. ಅವರ ಬಂದ ನಂತರವೇ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com